ಕನ್ನಡ ವಾರ್ತೆಗಳು

ಸಂದೇಶ ಪ್ರಶಸ್ತಿ ಪ್ರದಾನ 2015 .

Pinterest LinkedIn Tumblr

Sandesha_awards_1

ಮಂಗಳೂರು,ಜ.24: ನಗರದ ಬಜ್ಜೋಡಿ ಪ್ರೇಮನಗರದಲ್ಲಿರುವ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ಸಂದೇಶ ವತಿಯಿಂದ ಸಂದೇಶ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸಂಸ್ಥೆಯ ಆವರಣದಲ್ಲಿ ಶುಕ್ರವಾರ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ರೆ.ಗೀವರ್ಗೀಸ್ ಮಾರ್ ದಿವಾನ್ನಸಿಯೊಸ್ ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯ ಅತಿಥಿಯಾಗಿ ಬಳ್ಳಾರಿ ಬಿಷಪ್ ರೆ.ಹೆನ್ರಿ ಡಿಸೋಜ, ಮಂಗಳೂರು ಬಿಷಪ್ ರೆ.ಅಲೋಶಿಯಸ್ ಪಾವ್ಲ್ ಡಿಸೋಜ, ಉಡುಪಿ ಬಿಷಪ್ ರೆ.ಜೆರಾಲ್ಡ್ ಐಸಾಕ್ ಲೋಬೋ ಮುಖ್ಯ ಅತಿಥಿಯಾಗಿದ್ದರು.

Sandesha_awards_2 Sandesha_awards_3 Sandesha_awards_4

ಸಂದೇಶ ಸಾಹಿತ್ಯ ಪ್ರಶಸ್ತಿಯನ್ನು ಡಾ.ಸಿ.ವೀರಣ್ಣ, ಕೊಂಕಣಿ ಸಂಗೀತ ಪ್ರಶಸ್ತಿಯನ್ನು ಹೆನ್ರಿ ಡಿಸೋಜ, ಕಲಾಪ್ರಶಸ್ತಿಯನ್ನು ನವೀನ್ ಡಿ.ಪಡೀಲ್, ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಜಯಲಕ್ಷ್ಮೀ ದಾಮ್ಲೆ, ಮಾಧ್ಯಮ ಪ್ರಶಸ್ತಿಯನ್ನು ಡಾ.ಜಯಮಾಲ, ವಿಶೇಷ ಪ್ರಶಸ್ತಿಯನ್ನು ಗೋಪಾಲ ಖಾರ್ವಿ ಅವರಿಗೆ ಪ್ರದಾನ ಮಾಡಲಾಯಿತು.

Sandesha_awards_5 Sandesha_awards_6 Sandesha_awards_7

ರೆ.ಜಯಪ್ರಕಾಶ್ ಡಿಸೋಜ, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ನಾ ಡಿಸೋಜ, ರೆ.ಐವನ್ ಪಿಂಟೋ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೋ ಉಪಸ್ಥಿತರಿದ್ದರು. ಸಂದೇಶ ಪ್ರತಿಷ್ಠಾನ ನಿರ್ದೇಶಕ ರೆ.ವಿಕ್ಟರ್ ವಿಜಯ್ ಲೋಬೋ ಸ್ವಾಗತಿಸಿದರು.

Write A Comment