ಕಾಮತೃಷೆಗಾಗಿ ಆಡನ್ನೇ ಬಳಸಿಕೊಂಡ ಕಾಮುಕ
ಮೂಲ್ಕಿ: ಅತಿಯಾದ ಕಾಮುಕತೆಯ ಕಾಮತೃಷೆಗಾಗಿ ಮೂಕ ಪ್ರಾಣಿ ಆಡಿನ ಮೇಲೆಯೇ ಕಾಮುಕನೋರ್ವ ಅಸ್ವಾಭಾವಿಕ ಲೈಂಗಿಕ ಕ್ರಿಯೆಯನ್ನು ನಡೆಸಿ ಅಮಾನವೀಯವಾಗಿ ವರ್ತಿಸಿದ ಘಟನೆಯು ಇಲ್ಲಿನ ಮೂಲ್ಕಿ ಠಾಣಾ ವ್ಯಾಪ್ತಿಯ ಕೆ. ಎಸ್. ರಾವ್ ನಗರದಲ್ಲಿ ಬೆಳಕಿಗೆ ಬಂದಿದ್ದು. ಘಟನೆಗೆ ಸಂಬಂಧಪಟ್ಟಂತೆ ಆರೋಪಿ ಗುಲ್ಬರ್ಗ ಮೂಲದ ಬಿಜಾಪುರ ಕಾಲೋನಿಯ ಕೂಲಿ ಕಾರ್ಮಿಕ ಸಂತೋಷ್ ತಲವಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೆ.ಎಸ್.ರಾವ್.ನಗರದ ಮನೆಯೊಂದರ ಮುಂಬಾಗದಲ್ಲಿ ಕಟ್ಟಿ ಹಾಕಿದ್ದ ಆಡನ್ನು ರಾತ್ರಿ ಸಮಯದಲ್ಲಿ ಕಳ್ಳತನ ಮಾಡಿ ತನ್ನ ಮನೆಯ ಬಚ್ಚಲು ಕೋಣೆಯಲ್ಲಿ ಅಸ್ವಾಭಾವಿಕವಾಗಿ ಲೈಂಗಿಕ ಕ್ರಿಯೆ ನಡೆಸಿದಾಗ ಮೂಕ ಪ್ರಾಣಿ ಆಡು ಕಾಮುಕನ ಕೈಯಲ್ಲಿ ಕೊಸರಾಡಿ ಅರಚಿದ್ದರಿಂದ ಮಹಿಳೆಯೊರ್ವರು ಗಮನಿಸಿ ಸ್ಥಳೀಯರಿಗೆ ಮಾಹಿತಿ ನೀಡಿದರು. ಕಾಮುಕ ಸಂತೋಷ್ಗೆ ಲೈಂಗಿಕ ತೃಷೆಯ ನಶೆಯನ್ನು ಇಳಿಸಿ ಪೊಲೀಸರಿಗೆ ಹಸ್ತಾಂತರಿಸಿದರು ಎಂದು ತಿಳಿದು ಬಂದಿದೆ.
ಆಡಿನ ದೇಹದ ಹಿಂಭಾಗದ ಗುದದ್ವಾರದಲ್ಲಿ ರಕ್ತ ಹೊಸರುವುದನ್ನು ಗಮನಿಸಿದ ಆಡಿನ ಮಾಲಕರು ಮೂಲ್ಕಿ ಕಾರ್ನಾಡುವಿನ ಪಶು ವೈದ್ಯರ ಬಳಿ ತೆರಳಿ ತಪಾಸಣೆ ನಡೆಸಿ ಮೂಕ ಪ್ರಾಣಿಯ ಮೇಲೆ ಲೈಂಗಿಕ ಕ್ರಿಯೆಯು ನಡೆದಿರುವುದಾಗಿ ವೈದ್ಯರು ದೃಢೀಕರಿಸಿದ್ದಾರೆ. ಕೂಡಲೇ ಆಡಿನ ಮಾಲಕರು ಮೂಲ್ಕಿ ಠಾಣೆಯಲ್ಲಿ ಅಧಿಕೃತವಾಗಿ ಈ ದೂರು ದಾಖಲಿಸಿದ್ದಾರೆ.
ಸಂತೋಷ್ ಮದುವೆಯಾಗಿ ಸಂಸಾರಸ್ಥನಾದರು ಕಾಮುಕತನ ಹೋಗದಿರುವುದರಿಂದ ಸ್ಥಳೀಯರು ಈತನ ದುರ್ವರ್ತನೆಯಿಂದ ಆತಂಕಗೊಂಡಿದ್ದಾರೆ. ಹೆತ್ತವರು ಕೂಲಿ ಕೆಲಸಕ್ಕೆಂದು ವಾರಗಟ್ಟಲೆ ಮನೆಯಲ್ಲಿರುವುದಿಲ್ಲ ಇವನೊಂದಿಗೆ ತಾಯಿ, ತಂದೆ, ಅಜ್ಜಿ, ಸಹೋದರಿ ಸಹೋದರರ ತುಂಬು ಸಂಸಾರ ಇದ್ದರು ಈತನ ನೀಚ ವರ್ತನೆಗೆ ಅವರೇ ಬೇಸರ ವ್ಯಕ್ತಪಡಿಸಿದ್ದಾರೆ.
ತನಿಖೆಯ ವೇಳೆ ಆರೋಪಿ ಸಂತೋಷ್ ಆಡಿನ ಮೇಲೆಯೇ ಅಸ್ವಾಭವಿಕವಾಗಿ ಲೈಂಗಿಕ ಕ್ರಿಯೆ ನಡೆಸಿರುವುದನ್ನು ಒಪ್ಪಿಕೊಂಡಿದ್ದು ಪ್ರಾಣಿ ಹಿಂಸೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಮೂಲ್ಕಿ ಪೊಲೀಸರು ಮೂಡಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಯ ಗಡಿಪಾರಿಗೆ ಸ್ಥಳೀಯರ ಆಗ್ರಹ:
ಇಂತಹ ಹೀನ ಕೃತ್ಯ ನಡೆಸಿದ ಆರೋಪಿಯನ್ನು ಆತನ ಮೂಲ ಊರಾದ ಗುಲ್ಬರ್ಗಾ ಕಡೆಗೆ ಗಡಿಪಾರು ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪ್ರಾಣಿಯೊಡನೆ ಲೈಂಗಿಕ ಪ್ರಕ್ರಿಯೆಗೆ ಮುಂದಾದ ಆರೋಪಿಯು ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳಿಗೂ ಅಪಾಯ ತಂದೊಡ್ಡಬಹುದು ಎಂದು ಆತಂಕ ವ್ಯಕ್ತಪಡಿಸಿರುವ ಸ್ಥಳೀಯ ಮಹಿಳೆಯರು ಇಂಥವರಿಗೆ ಕ್ರೂರ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ವರದಿ ಕೃಪೆ : ನರೇಂದ್ರ ಕೆರೆಕಾಡು