ಕನ್ನಡ ವಾರ್ತೆಗಳು

ನಾಡಗೀತೆ ತರಬೇತಿ ಶಿಬಿರ ಉದ್ಘಾಟನೆ.

Pinterest LinkedIn Tumblr

kallura_nada_gieetha_photo

ಮಂಗಳೂರು,ಜ.15 : ಕನ್ನಡ ಸಾಹಿತ್ಯ ಪರಿಷತ್ತು ದ.ಕ. ಜಿಲ್ಲೆ ಮತ್ತು ಮಂಗಳೂರು ತಾಲೂಕು ಘಟಕ ಹಾಗೂ ಸೈಂಟ್ ಜೋಸೆಫ್ಸ್ ಹೈಸ್ಕೂಲ್, ಕಂಕನಾಡಿ ಇವರುಗಳ ಜಂಟಿ ಆಶ್ರಯದಲ್ಲಿ ನಾಡಗೀತೆ ತರಬೇತಿ ಕಾರ್ಯಕ್ರಮ ಇತ್ತಿಚೇಗೆ ಜರುಗಿತು.

ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆಯಲ್ಲಿ ಹೈಸ್ಕೂಲ್‌ನ ಮುಖ್ಯೋಪಾಧ್ಯಯರಾದ ಸಿ|| ರೋಶ್ನಿ ಉದ್ಘಾಟಿಸಿದರು. ಬೆಸೆಂಟ್ ರಾಷ್ಟ್ರೀಯ ಫ್ರೌಢಶಾಲೆಯ ಅಧ್ಯಾಪಕಿ ಶ್ರೀಮತಿ ರತ್ನಾವತಿ ಜೆ. ಬೈಕಾಡಿ ನಾಡಗೀತೆಯ ತರಬೇತಿ ನೀಡಿದರು.

ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಶ್ರೀಮತಿ ಜುಡಿತ್ ಮಸ್ಕರೇನಸ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಬಿ. ಶೆಟ್ಟಿ ಸ್ವಾಗತಿಸಿದರು, ಕಾರ್ಯದರ್ಶಿ ಶ್ರೀಮತಿ ಸುಕನ್ಯಾ ಭಟ್ ಧನ್ಯವಾದ ಸಮರ್ಪಿಸಿದರು.

Write A Comment