ಕನ್ನಡ ವಾರ್ತೆಗಳು

ಮಲವಂತಿಗೆ ಗ್ರಾಮದ ರಾಷ್ಟ್ರೀಯ ಉದ್ಯಾನದೊಳಗಿನ ಅಭಿವೃದ್ಧಿ ಕಾಮಗಾರಿಗೆ ಮರುಚಾಲನೆ: ಜಿಲ್ಲಾಧಿಕಾರಿ

Pinterest LinkedIn Tumblr

dc_natinl_park

ಬೆಳ್ತಂಗಡಿ, ಜ.15 : ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿನ ಕುಟುಂಬಗಳ ಪುನರ್ವಸತಿಗೆ ಹಾಗೂ ಈ ಪ್ರದೇಶದಲ್ಲಿನ ವಾಸಿಸುವ ಜನರ ಮೂಲ ಭೂತ ಆವಶ್ಯಕತೆಗಳ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ. ಇದಕ್ಕೆ ಸಾಕಷ್ಟು ಅನು ದಾನವೂ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಹೇಳಿದರು. ಅವರು ಬುಧವಾರ ಮಲವಂತಿಗೆ ಗ್ರಾಪಂ ವ್ಯಾಪ್ತಿಯ ರಾಷ್ಟ್ರೀಯ ಉದ್ಯಾನ ವನದೊಳಗಿನ ಎಳನೀರು ಎಂಬಲ್ಲಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಈ ಪ್ರದೇಶದ ಹಲವು ಕುಟುಂಬಗಳು ಅರಣ್ಯದಿಂದ ಹೊರಬರಲು ಅರ್ಜಿ ಸಲ್ಲಿಸಿವೆ. ಆದರೆ ಕೆಲದಾಖಲೆಗಳ ಕೊರತೆಯಿಂದಾಗಿ ಹಲವರಿಗೆ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಇಂತಹ ಪ್ರಕರಣಗಳನ್ನು ಪರಿಶೀಲಿಸಲಾಗಿದ್ದು, ಕೆಲವೇ ದಿನಗಳಲ್ಲಿ ಇದಕ್ಕೆ ಪರಿಹಾರ ದೊರಕಿಸಲಾಗುವುದು. ಪುನರ್ವಸತಿ ಮತ್ತು ಅಭಿವೃದ್ಧಿ ಬಗೆಗಿನ ಗೊಂದಲಗಳಿಂದ ಈ ಪ್ರದೇಶದ ಕೆಲ ಅಭಿವೃದ್ಧಿ ಕಾಮಗಾರಿಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಇನ್ನು ಹಲವಾರು ಕುಟುಂಬಗಳು ಇಲ್ಲೇ ವಾಸಿಸುತ್ತಿರುವ ಹಿನ್ನೆಲೆಯಲ್ಲಿ ಅವುಗಳಿಗೆ ಮತ್ತೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಎಳನೀರು, ಗುತ್ಯಡ್ಕ, ಬಡಾಮನೆ, ಬಂಗಾರುಪಲ್ಕೆ ಪ್ರದೇಶದಲ್ಲಿ ಸುಮಾರು 150 ಕುಟುಂಬಗಳಿದ್ದು, ಇವರಿಗೆ ಸಂಪರ್ಕಿಸಲು ಅನುಕೂಲವಾಗಿರುವ ದಿಡುಪೆ-ಎಳನೀರು ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ನಾಗರಿಕರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು. ಈ ಬಗ್ಗೆ ಭರವಸೆ ನೀಡದ ಜಿಲ್ಲಾಧಿಕಾರಿ, ಅರಣ್ಯ ಇಲಾಖೆಯ ಕಾನೂನುಗಳನ್ನು ಪರಿಶೀಲಿಸಿದ ಬಳಿಕ ಈ ಬಳಿಕ ಮುಂದಿನ ಹೆಜ್ಜೆ ಇಡಲಾಗುವುದು ಎಂದರು.

ಮಲವಂತಿಗೆ ಗ್ರಾಮದಲ್ಲಿ ರಾ. ಉದ್ಯಾನವನದ ಒಳಗೆ ಒಟ್ಟು 94 ಕುಟುಂಬಗಳಿದ್ದು, ಎಳನೀರಿನಲ್ಲಿ 42 ಮನೆಗಳಿವೆ. ಈ ಪೈಕಿ 8 ಕುಟುಂಬಗಳಿಗೆ ಸಂಬಂಧಿಸಿದಂತೆ 23 ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆ. ಬಡಾಮನೆ ಮತ್ತು ಬಂಗಾರುಪಲಿಕೆಯಲ್ಲಿ 21 ಕುಟುಂಬಗಳಿದು,್ದ ಇವರು ಪುನರ್ವ ಸತಿಯ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿಲ್ಲ. ಉಳಿದಂತೆ ಮಲವಂತಿಗೆ ಗ್ರಾಮದಲ್ಲಿ 48 ಅರ್ಜಿಗಳು ಬಂದಿದ್ದು ಪರಿಶೀಲನೆ ನಡೆಯುತ್ತಿದೆ ಎಂದು ಅರಣ್ಯ ಇಲಾಖೆ, ವನ್ಯಜೀವಿ ಅಧಿಕಾರಿಗಳು ಮಾಹಿತಿ ನೀಡಿದರು.

ಎಳನೀರು, ಗುತ್ಯಡ್ಕ ಪ್ರದೇಶ ಚಿಕ್ಕಮಗಳೂರು ಜಿಲ್ಲೆಗೆ ಸಮೀಪವಾಗಿದ್ದು ಇದನ್ನು ಮೂಡಿಗೆರೆ ತಾಲೂಕಿಗೆ ಸೇರಿಸುವ ಪ್ರಸ್ತಾವನೆ ಜಿಲ್ಲಾಧಿಕಾರಿಯವರ ಮುಂದೆ ಬಂದಾಗ, ಇಲ್ಲಿಂದ ಮೂಡಿಗೆರೆ ತಾಲೂಕು ಕೇಂದ್ರಕ್ಕೆ ಕೇವಲ 60 ಕಿ.ಮೀ. ದೂರ. ಬೆಳ್ತಂಗಡಿ ಬರಬೇಕಾದರೆ 120 ಕಿ.ಮೀ. ದೂರವಾಗುತ್ತದೆ ಎಂಬುದನ್ನು ಜಿಲ್ಲಾಧಿಕಾರಿಯ ಗಮನಕ್ಕೆ ತರಲಾ ಯಿತು. ಆದರೆ ಅರುಣ್‌ಕುಮಾರ್ ನೇತೃತ್ವದಲ್ಲಿ ಕೆಲವರು ಇದನ್ನು ವಿರೋಧಿ ಸಿದರು. ನಿಮಗೆ ಅಗತ್ಯವಿದ್ದರೆ ಗ್ರಾಪಂ ಮೂಲಕ ಈ ಬಗ್ಗೆ ಮನವಿ ಕಳುಹಿ ಸಿದಲ್ಲಿ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಇಬ್ರಾಹೀಂ ಸೂಚಿಸಿದರು. ದಿಡುಪೆ-ಎಳನೀರು ರಸ್ತೆ ನಡುವೆ, ರಾಷ್ಟ್ರೀಯ ಉದ್ಯಾನವನದೊಳಗಿನ ತಿಮ್ಮಯ್ಯಗದ್ದೆ, ಅರಸಿನಮಕ್ಕಿ ಪ್ರದೇಶದ 6 ಮನೆಯವರು ರಸ್ತೆ ಬದಿಯಲ್ಲಿ ಕಾದು ನಿಂತು ಜಿಲ್ಲಾಧಿಕಾರಿಯವರನ್ನು ಅಹ ವಾಲು ಸಲ್ಲಿಸಿದರು.

ಇಲ್ಲಿನ ಕುಟುಂಬ ಗಳ ಜಮೀನಿನ ದಾಖಲೆಗಳು ಇಲ್ಲವಾ ಗಿದ್ದು ಸೂಕ್ತ ಪರಿಹಾರ ದೊರೆತಲ್ಲಿ ಅರಣ್ಯದಿಂದ ಹೊರಹೋಗಲು ಸಿದ್ಧ ಎಂದು ನಾಗರಿಕರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವನ್ಯಜೀವಿ ವಿಭಾಗದ ಡಿಎಫ್‌ಒ ರಮೇಶ್, ಈ ಕುಟುಂಬಗಳ ಮೇಲೆ ಅರಣ್ಯ ಅತಿಕ್ರಮಗಳ ಬಗ್ಗೆ ಈಗಾಗಲೇ ಪ್ರಕರಣ ದಾಖಲಿಸಿದ್ದೇವೆ. ಈ ಬಗ್ಗೆ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದರು. ನಾವು 1971ರಿಂದ ಇಲ್ಲಿ ವಾಸಿಸುತ್ತಿರುವ ಬಗ್ಗೆ ದಾಖಲೆಗಳಿವೆ. ಆಗ ನಮಗೆ ಯಾರೂ ತೊಂದರೆ ಕೊಟ್ಟಿರಲಿಲ್ಲ ಎಂದು ಸಂತ್ರಸ್ತರು ವಿವರಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಅವರಿಗೂ ಬದುಕುವ ಅವಕಾಶ ನೀಡಬೇಕು. ಇವರ ವಿಚಾರವನ್ನು ವಿಶೇಷ ಪ್ರಕರಣವೆಂದು ಗುರುತಿಸಿ ಅವರಿಗೆ ಪರಿಹಾರ ನೀಡುವಂತೆ ಸೂಚಿಸಿದರು. ಯಾವುದೇ ಸಮಸ್ಯೆ ಯಾದರೆ ನನ್ನನ್ನು ಸಂಪರ್ಕಿಸಿ ಎಂದು ಜನರಿಗೆ ಭರವಸೆ ನೀಡಿದರು.

ಮೆಸ್ಕಾಂ ಕಾರ್ಯನಿರ್ವಹಣಾಧಿಕಾರಿ ಚಿಕ್ಕ ನಂಜಯ್ಯ, ಜಿಲ್ಲಾ ಎಸ್ಪಿ ಡಾ. ಶರಣಪ್ಪ, ಎಎಸ್ಪಿ ರಾಹುಲ್‌ಕುಮಾರ್, ತಹಶೀಲ್ದಾರ್ ಪುಟ್ಟಸ್ವಾಮಿ, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ತಾಪಂ ಅಧ್ಯಕ್ಷೆ ಜಯಂತಿ ಪಾಲೇದು, ಸದಸ್ಯೆ ಪ್ರಶಾಂತಿ, ಗ್ರಾಪಂ ಅಧ್ಯಕ್ಷೆ ಜಾನಕಿ, ಕಾರ್ಯನಿರ್ವಹಣಾಧಿಕಾರಿ ಮಹಾಂ ತೇಶ್, ಗ್ರಾಪಂ ಮಾಜಿ ಅಧ್ಯಕ್ಷ ದಿನೇಶ್ ಗೌಡ ಮತ್ತಿತರರು ಹಾಜರಿದ್ದರು.

Write A Comment