ಕುಂದಾಪುರ : ಕಳೆದ ಒಂಬತ್ತು ದಿನಗಳಿಂದ ನಡೆಯುತ್ತಿರುವ ವಾರಾಹಿ ಯೋಜನೆ ಅನುಷ್ಟಾನಕ್ಕೆ ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ವಿದ್ಯಾರ್ಥಿಗಳು ಬೆಂಬಲ ಸೂಚಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು ಕಾಲೇಜಿನಿಂದ ಆರಂಭಗೊಂಡು ಕುಂದಾಪುರ ತಹಶಿಲ್ದಾರ್ ಕಛೇರಿಯವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ತಹಶಿಲ್ದಾರ್ ಕಛೇರಿ ಎದುರು ಮಾತನಾಡಿದ ವಿದ್ಯಾರ್ಥಿನಿ ದೀಕ್ಷಾ ಕೆ.ಎಸ್., ನೀರು ಮಾನವನ ನಿತ್ಯ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದ್ದು, ಜೀವನಾಧಾರವಾಗಿರುವ ನೀರು ಎಲ್ಲರಿಗೂ ಅಗತ್ಯ, ಐಷಾರಾಮಿ ಜೀವನ ಕೇಳುತ್ತಿಲ್ಲ, ನಮಗೆ ನೀರು ಬೇಕು, ಅದನ್ನು ಕೊಡಿ, ಡ್ಯಾಂ ನೀರ್ಮಿಸಿದ್ದಾರೆ ನಿಜ ಆದರೇ ಕಾಲುವೆಗೆ ನೀರು ಹರಿಸುವ ಕಾರ್ಯವಾಗಿಲ್ಲ. ಪ್ರತಿಯೊಂದು ಸರಕಾರ ಬರುತ್ತಿದೆ, ಹೋಗುತ್ತಿದೆ, ಆದರೇ ಯಾರು ಇದನ್ನು ಪೂರ್ಣಗೊಳಿಸುವ ಕಾರ್ಯಕ್ಕೆ ಕೈಹಾಕಿಲ್ಲ, ಕೇವಲ ಆಶ್ವಾಸನೆ ನೀಡುತ್ತಿರುವುದು ಮಾತ್ರವೇ ಸರಕಾರದಿಮದ ಆಗಿದೆ. ವಾರಾಹಿಗೆ ನೀರು ಹರಿಸುವ ಕುರಿತು ಕಾಲೇಜು ವಿದ್ಯಾರ್ಥಿಗಳಾದ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಈ ಸಂದರ್ಭದಲ್ಲಿ ನೂರಾರು ವಿದ್ಯಾರ್ಥಿಗಳು ತಹಶಿಲ್ದಾರ್ ಗಾಯತ್ರಿ ನಾಯಕ್ ಅವರಿಗೆ ಮನವಿ ಸಲ್ಲಿಸಿದರು.