ಮಂಗಳೂರು,ಜ.09 : ಭಾರತದ ಕ್ರಿಕೆಟ್ ತಂಡಕ್ಕೆ ಸದಸ್ಯರನ್ನು ಆಯ್ಕೆ ಮಾಡುವ ಸಲುವಾಗಿ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಸ್ಪಿನ್ನರ್ ರಾದ ಅನಿಲ್ ಕುಂಬ್ಳೆಯವರು ಶುಕ್ರವಾರ ನಗರದ ನೆಹರು ಮೈದಾನಕ್ಕೆ ಭೇಟಿ ನೀಡಿದರು. ಈ ವೇಳೆ ಮೆಯರ್ ಮಹಾಬಲ ಮಾರ್ಲ ಕುಂಬ್ಳೆಯನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ಇದುವರೆಗೆ ಕರ್ನಾಟಕದಿಂದ 2800 ಆಟಗಾರರು ನೋಂದಾವಣೆ ಮಾಡಿಕೊಂಡಿದ್ದಾರೆ. ಅವರಲ್ಲಿ ಬೆಂಗಳೂರಿನಿಂದ 2000, ಮಂಗಳೂರಿನಿಂದ 200, ಹಾಗೂ ಹುಬ್ಬಳ್ಳಿಯಿಂದ 600, ಮಂದಿ ಇದ್ದಾರೆ.
ಜ.18 ರಂದು ಇದರ ಅಂತಿಮ ಆಯ್ಕೆಯು ಬೆಂಗಳೂರಿನಲ್ಲಿ ನಡೆಯಲಿದೆ. ಮಂಗಳೂರಿನಿಂದ 10 ಆಟಗಾರರನ್ನು ಆಯ್ಕೆ ಮಡಲಾಗುವುದು ಎಂದು ದ.ಕ ಕ್ರಿಕೆಟ್ ಅಸೋಸಿನ್ ಅಧ್ಯಕ್ಷ ಶ್ರೀಕಾಂತ್ ತಿಳಿಸಿದ್ದರು.
ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ಮಾಜಿ ಆರ್ ಅನಂತ್, ಭಾರತೀಯ ಮಾಜೀ ಕ್ರಿಕೆಟಿಗ, ವಿಜಯ್ ಭಾರಧ್ವಾಜ್, ಆಲ್ರೌಂಡರ್ ಹಾಗೂ ಎಡಗೈ ಸ್ಪಿನ್ನರ್ ಕ್ರಿಕೆಟಿಗ ಶ್ರೀಧರನ್ ಶ್ರೀರಾಮ್ ಎಡಗೈ ಮತ್ತು ಬಲಗೈ ಬ್ಯಾಟುಗಾರ ಮಾಜಿ ಕೆ ಜೆಸ್ ವಂತ್ , ಮೊದಲಾದವರು ಉಪಸ್ಥಿತರಿದ್ದರು.