ಕನ್ನಡ ವಾರ್ತೆಗಳು

ಜ.15  ರಿಂದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭ

Pinterest LinkedIn Tumblr

kadri_temple_pics_1

ಮಂಗಳೂರು,ಜ.೦9: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ದಿನಾಂಕ 15-1-2015 ರಿಂದ 23-1-2015 ರ ತನಕ ಜರುಗಲಿದ್ದು, ದಿನಾಂಕ 25-1-2015 ರಂದು ರಾತ್ರಿ ಮಲರಾಯ ದೈವದ ನೇಮೋತ್ಸವವು ನಡೆಯಲಿದೆ.

ದಿನಾಂಕ 15-1-2015 ರಂದು ಬೆಳಿಗ್ಗೆ 4.00 ರಿಂದ ತೀರ್ಥಸ್ನಾನ, ಸಂಜೆ6.00 ಕ್ಕೆ ಧ್ವಜಸ್ತಂಭ‌ ಆರೋಹಣ, ಶ್ರೀ ಮಲರಾಯ ದೈವದ ಭಂಡಾರ ಆಗಮನ ಮತ್ತು ರಾತ್ರಿ 10.00 ಕ್ಕೆ ಗರುಡಾರೋಹಣ, ದಿ.16-1-2015 ಸಂಜೆ 7.00 ಕ್ಕೆ ಉತ್ಸವ ಬಲಿ ಪ್ರಾರಂಭ, ದಿ.17-01-2015 ಸಂಜೆ 6.00 ಕ್ಕೆ ಬಿಕರ್ನಕಟ್ಟೆ ಸವಾರಿ ಬಲಿ, ದಿ.18-1-2015 ಸಂಜೆ 6.00 ಕ್ಕೆ ಮಲ್ಲಿಕಟ್ಟೆ ಸವಾರಿ ಬಲಿ, ದಿ.19-1-2015 ಸಂಜೆ 6.00ಕ್ಕೆ ಮುಂಡಾಣಕಟ್ಟೆ ಸವಾರಿ ಬಲಿ, ದಿ20-01-2015 ಸಂಜೆ 6.00 ಕ್ಕೆ ಕೊಂಚಾಡಿ ಸವಾರಿ ಬಲಿ, ದಿ.21-01-2015 ಏಳನೇದೀಪೋತ್ಸವ, ಮಧ್ಯಾಹ್ನ 12.00ಕ್ಕೆ ಮಹಾಪೂಜೆ ಹಾಗೂ ಸಾರ್ವಜನಿಕ‌ಅನ್ನಸಂತರ್ಪಣೆ ಸಂಜೆ 7.00 ಉತ್ಸವ ಬಲಿ ಪ್ರಾರಂಭ, ದಿ.22-1-2015 ಶ್ರೀ ಮನ್ಮಹಾರಥೋತ್ಸವ ಮಧ್ಯಾಹ್ನ 12.00 ಕ್ಕೆ ಮಹಾಪೂಜೆ 1.30 ಕ್ಕೆ ರಥಾರೋಹಣ, ಸಂಜೆ 6.00 ಕ್ಕೆ ಶ್ರೀ ಮನ್ಮಹಾರಥೋತ್ಸವ, ಬೆಳ್ಳಿರಥೋತ್ಸವ, ದಿ. 23-01-2015 ಅವಭೃತ ಸ್ನಾನಬೆಳಿಗ್ಗೆ 7.00 ಕ್ಕೆ ಶ್ರೀ ದೇವರಕವಾಟೋದ್ಘಾಟನೆ ಮತ್ತು ಪೂಜೆ ನಂತರತುಲಾಬಾರ ಸೇವೆ, ರಾತ್ರಿ 10.30ಕ್ಕೆ ಧ್ವಜಾವರೋಹಣ ನಡೆಯಲಿದೆ ಮತ್ತು ದಿನಾಂಕ 25-01-2015 ರಂದು ಬೆಳಿಗ್ಗೆ 10.00 ಕ್ಕೆ ಶ್ರೀ ದೇವಳದಿಂದ ಶ್ರೀ ಮಲರಾಯದೈವದ ಭಂಡಾರ ಹೊರಡುವುದು. ರಾತ್ರಿ 9.00 ಕ್ಕೆ ಶ್ರೀ ಮಲರಾಯದೈವದ ನೇಮೋತ್ಸವಜರುಗಲಿದೆ‌ಎಂದು ದೇವಳದ ಆಡಳಿತದ ಮೊಕ್ತೇಸ್ತರ ತಿಳಿಸಿದ್ದಾರೆ

Write A Comment