ಮಂಗಳೂರು,ಡಿ.29 : ಮಂಗಳೂರು ಗಣೇಶ್ ಬೀಡಿ ಕಂಪೆನಿಯ ಪಾಲುದಾರರಾದ ಉದ್ಯಮಿ ಡಾ.ಎಂ ಜಗನ್ನಾಥ್ ಶೆಣೈ ಅವರಿಗೆ ಆದಿತ್ಯವಾರ ” ಮಾನವ ರತ್ನ” ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡವರಿಗಾಗಿ ರೋಟರಿ ಕ್ಲಬ್ ಅಫ್ ಮೈಸೂರ್ ವೆಸ್ಟ್ ವತಿಯಿಂದ ಕೊಡುವಂತಹ ಈ ಪ್ರಶಸ್ತಿಯನ್ನು ಮೈಸೂರು ವಿ ವಿ ಸೆನೆಟ್ ಭವನದಲ್ಲಿ ನಡೆದ ಸಮಾರಂಭದಲ್ಲ್ಲಿ ಪದ್ಮಭೂಷಣ ಪ್ರಶಸ್ತಿ ಪುರಸ್ಕ್ರತ ಕೆ ವಿ ಕಾಮತ್ ಅವರು ಜಗನ್ನಾಥ್ ಅವರಿಗೆ ನೀಡಿ ಗೌರವಿಸಿದರು.
ವೇದಿಕೆಯಲ್ಲಿ ರೋಟರಿ ಕ್ಲಬ್ ಆಫ್ ಮೈಸೂರ್ ವೆಸ್ಟ್ ಅಧ್ಯಕ್ಷ ಎಸ್ ಸುಂದರಂ , ರೋ ಸ್ಯಾಮ್ ಚೆರಿಯನ್, ಕಾರ್ಯದರ್ಶಿ ಚೇತನ್ ಕೊಟ್ಯಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.