ಮಂಗಳೂರು,ಡಿ.09 : ಕಲ್ಕೂರ ಪ್ರತಿಷ್ಠಾನವು ಪ್ರಕಟಿಸಿರುವ ದೊಡ್ಡ ಅಕ್ಷರಗಳ ಗೋಡೆ ಕ್ಯಾಲೆಂಡರನ್ನು ಇತ್ತೀಚೆಗೆ ಪೇಜಾವರ ಶ್ರೀಗಳು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮಹಾಬಲ ಮಾರ್ಲರಿಗೆ ಹಸ್ತಾಂತರಿಸುವ ಮೂಲಕ ಅನಾವರಣಗೊಳಿಸಿದರು.
ಈ ಕ್ಯಾಲೆಂಡರ್ರಾಷ್ಟ್ರೀಯ ಪಂಚಾಂಗ ಆಧರಿತತಿಥಿ, ವಾರ, ನಕ್ಷತ್ರ, ವಿಶೇಷ ದಿನಗಳ ಕನ್ನಡ ಮಾಹಿತಿಗಳನ್ನೊಳಗೊಂಡಿದೆ. ಈ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಪಿ. ಜಯರಾಂ ಭಟ್, ಶರವು ರಾಘವೇಂದ್ರ ಶಾಸ್ತ್ರಿ, ಎಂ.ಬಿ. ಪುರಾಣಿಕ್, ಕೆ.ಎಸ್. ಕಲ್ಲೂರಾಯ, ಪ್ರಭಾಕರರಾವ್ ಪೇಜಾವರ, ಸುಧಾಕರ ರಾವ್ ಪೇಜಾವರ ಮೊದಲಾದವರು ಉಪಸ್ಥಿತರಿದ್ದರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು.