ಕನ್ನಡ ವಾರ್ತೆಗಳು

ಕಲ್ಕೂರ ಪ್ರತಿಷ್ಠಾನದ ವತಿಯಿಂದ ಗೋಡೆ ಕ್ಯಾಲೆಂಡರ್ ಅನಾವರಣ.

Pinterest LinkedIn Tumblr

kalkura_calnder_photo

ಮಂಗಳೂರು,ಡಿ.09 : ಕಲ್ಕೂರ ಪ್ರತಿಷ್ಠಾನವು ಪ್ರಕಟಿಸಿರುವ ದೊಡ್ಡ ಅಕ್ಷರಗಳ ಗೋಡೆ ಕ್ಯಾಲೆಂಡರನ್ನು ಇತ್ತೀಚೆಗೆ ಪೇಜಾವರ ಶ್ರೀಗಳು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮಹಾಬಲ ಮಾರ್ಲರಿಗೆ ಹಸ್ತಾಂತರಿಸುವ ಮೂಲಕ ಅನಾವರಣಗೊಳಿಸಿದರು.

ಈ ಕ್ಯಾಲೆಂಡರ್‌ರಾಷ್ಟ್ರೀಯ ಪಂಚಾಂಗ ಆಧರಿತತಿಥಿ, ವಾರ, ನಕ್ಷತ್ರ, ವಿಶೇಷ ದಿನಗಳ ಕನ್ನಡ ಮಾಹಿತಿಗಳನ್ನೊಳಗೊಂಡಿದೆ. ಈ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಪಿ. ಜಯರಾಂ ಭಟ್, ಶರವು ರಾಘವೇಂದ್ರ ಶಾಸ್ತ್ರಿ, ಎಂ.ಬಿ. ಪುರಾಣಿಕ್, ಕೆ.ಎಸ್. ಕಲ್ಲೂರಾಯ, ಪ್ರಭಾಕರರಾವ್ ಪೇಜಾವರ, ಸುಧಾಕರ ರಾವ್ ಪೇಜಾವರ ಮೊದಲಾದವರು ಉಪಸ್ಥಿತರಿದ್ದರು. ಕಲ್ಕೂರ ಪ್ರತಿಷ್ಠಾನದ‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು.

Write A Comment