ಕನ್ನಡ ವಾರ್ತೆಗಳು

ಕಾಳಧನದ ಕುರಿತು ಪ್ರತಿಪಕ್ಷಗಳಿಂದ ತೀವ್ರ ವಾಗ್ದಾಳಿಯನ್ನು ನಿರೀಕ್ಷಿಸಿರುವ ಸರಕಾರ, ಚರ್ಚೆಗೆ ಸಿದ್ಧ ಎಂದ ಬಿಜೆಪಿ.

Pinterest LinkedIn Tumblr

black money

ಹೊಸದಿಲ್ಲಿ : ವಿದೇಶಗಳಿಂದ ಕಾಳಧನವನ್ನುಮರಳಿ ತರಲು ನಾವು ಬದ್ಧರಾಗಿದ್ದು, ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇವೆ. ಕಾಳಧನದ ಕುರಿತು ಚರ್ಚೆ‌ಎಗೆ ಸರಕಾರ ಸಂಪೂರ್ಣ ಸಜ್ಜಾಗಿದೆ” ಎಂದು ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ರಾಜೀವ್‌ ಪ್ರತಾಪ್‌ ರೂಡಿ ಅವರು ಬಿಜೆಪಿ ಸಂಸದೀಯ ಪಕ್ಷದ ಸಭೆಯ ಬಳಿಕ ತಿಳಿಸಿದರು.

ಸಂಸತ್‌ ಭವನದ ಗ್ರಂಥಾಲಯದಲ್ಲಿ ಸಭೆ ನಡೆದಿದ್ದು, ವಿತ್ತ ಸಚಿವ ಅರುಣ್‌ ಜೇಟ್ಲಿ ಅವರು ಜಿ‌ಎಸ್‌ಟಿ ಬಗ್ಗೆ ಮಾತನಾಡಿದರು. ಚಳಿಗಾಲದ ಅಧಿವೇಶನವನ್ನು ಯಶಸ್ವಿಯಗೊಳಿಸುವಂತೆ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಸಂಸದರಿಗೆ ಮನವಿ ಮಾಡಿದರು.

ಜಿ‌ಎಸ್‌ಟಿ ವಿಧೇಯಕವನ್ನು ಈ ಅಧಿವೇಶನದಲ್ಲಿ ಮಂಡಿಸಲಾಗುವುದು ಹಾಗೂ ಮುಂದಿನ ಅಧಿವೇಶನದಲ್ಲಿ ಅದನ್ನು ಅಂಗೀಕರಿಸಲಾಗುವುದು ಎಂದು ಜೇಟ್ಲಿ ಸದಸ್ಯರನ್ನುದ್ದೇಶಿಸಿ ನುಡಿದರು.

ಸಭೆಯಲ್ಲಿ ಪಕ್ಷದ ಹಿರಿಯರಾದ ಎಲ್‌.ಕೆ ಆಡ್ವಾಣಿ ಹಾಗೂ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಸೇರಿದಂತೆ ಎಲ್ಲ ಸಂಸದರು ಪಾಲ್ಗೊಂಡಿದ್ದರು. ಗೃಹಸಚಿವ ರಾಜನಾಥ್‌ ಸಿಂಗ್‌ ಹಾಜರಿರಲಿಲ್ಲ.

Write A Comment