ಕನ್ನಡ ವಾರ್ತೆಗಳು

ಬಿಲ್ಲವ ಭವನದಲ್ಲಿ ನಾಲ್ಕು ಕೃತಿಗಳ ಬಿಡುಗಡೆ

Pinterest LinkedIn Tumblr

 

mumbai_eswar_ali_1

ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್

ಮುಂಬಯಿ: ಪೂಜಾ ಪ್ರಕಾಶನ ಮುಂಬಯಿ ಇವರು ಸಾಹಿತಿ, ಕವಿ ಶಿಮಂತೂರು ಚಂದ್ರಹಾಸ ಸುವರ್ಣ ಅವರ “ಸುವರ್ಣ ವಚನಗಳು’ಮತ್ತು ತುಳು ಹನಿಗವನ ಸಂಕಲನ “ಒಸರ್‌’ಎಂಬ ಕೃತಿಗಳು ಹಾಗೂ ಕವಿ, ಲೇಖಕಿ ಶಾರದಾ ಎ. ಅಂಚನ್‌ ಅವರ “ನಡೆ ನೀ ಮುಂದೇ’ ಕನ್ನಡ ಕವನ ಸಂಕಲನ ಮತ್ತು “ಪಾರ್ದನ’ ತುಳು ಕವನ ಸಂಕಲನ ಬಿಡುಗಡೆ ಸಮಾರಂಭವನ್ನು ನ. 22ರಂದು ಸಾಂತಾಕ್ರೂಜ್‌ (ಪೂ.) ಬಿಲ್ಲವ ಭವನದಲ್ಲಿ ಆಯೋಜಿಸಿದ್ದರು.

mumbai_eswar_ali_2

ಸಮಾರಂಭದ ಅಧ್ಯಕ್ಷತೆಯನ್ನು ಬಿಲ್ಲವರ ಅಸೋಸಿಯೇಶನ್‌ ಗೌರವಾಧ್ಯಕ್ಷ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯ ಸಿ. ಸುವರ್ಣ ವಹಿಸಿದ್ದು, ಸಾಹಿತಿ ಹಾಗೂ ಕಲಾವಿದರಿಗೆ ಸದಾ ಗೌರವ ನೀಡುತ್ತ ಬಂದಿರುವುದನ್ನು ಸ್ಮರಿಸಿದರು.ಮುಖ್ಯ ಅತಿಥಿಯಾಗಿ ಛತ್ರಪತಿ ಶಿವಾಜಿ ಪುರಸ್ಕೃತ ಶಿಮಂತೂರು ಜಯ ಎ. ಶೆಟ್ಟಿ ಆಗಮಿಸಿದ್ದು. ಮುಂಬಯಿಯ ಸಾಹಿತಿಗಳು ಕ್ರೀಡಾ ಲೋಕದ ಬಗ್ಗೆಯೂ ಬರೆಯಲಿ ಎಂದರು.

mumbai_eswar_ali_3

ಕೃತಿಯನ್ನು ಅಕ್ಷಯ ಮಾಸಿಕರ ಗೌ| ಸಂಪಾದಕ, ಸಾಹಿತಿ ಎಂ. ಬಿ. ಕುಕ್ಯಾನ್‌ ಬಿಡುಗಡೆಗೊಳಿಸಿದರು.  ಅಕ್ಷಯದ ಸಂಪಾದಕ ಡಾ. ಈಶ್ವರ ಅಲೆವೂರು ಹಾಗೂ ಪತ್ರಕರ್ತ, ಸಾಹಿತಿ ಶ್ರೀನಿವಾಸ ಜೋಕಟ್ಟೆ ಅವರು ಕೃತಿಗಳನ್ನು ಪರಿಚಯಿಸಿದರು. ಕಾರ್ಯಕ್ರಮವನ್ನು ಕೃಷ್ಣರಾಜ್ ಸುವರ್ಣ ನಿರ್ವಹಿಸಿದರು.

Write A Comment