ಮಂಡ್ಯ,ನ.24: ಮಳವಳ್ಳಿ ತಾಲೂಕಿನ ಕುಸ್ತಿ ಪಟು ಅವಿನಾಶ್ ಭವಿಷ್ಯಕ್ಕಾಗಿ ಅವನ ತಂದೆ ಕಿಡ್ನಿಯನ್ನು ಮಾರಲು ಹೊರಟಿರುವ ಹೃದಯವಿದ್ರಾವಕ ಸಂಗತಿ ವರದಿಯಾಗಿದೆ. ಮಗನ ಸಾಧನೆಗಾಗಿ ಅವರ ತಂದೆ ಜೀವನವನ್ನೇ ಪಣಕ್ಕಿಟ್ಟಿದ್ದಾರೆ.
ಮಗ ಬೆವರುಹರಿಸಿ ಶ್ರೇಷ್ಠ ಕುಸ್ತಿಪಟುವಾಗಿ ಸಾಧನೆ ಮಾಡಿದ್ದಾನೆ. ಆದರೆ ಮಗನಿಗೆ ರಷ್ಯಾಗೆ ತೆರಳಲು ಆರ್ಥಿಕ ತೊಂದರೆ. ಹಣಕ್ಕಾಗಿ ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗಿ ತಲೆ ಮೇಲೆ ಕೈಹೊತ್ತು ಕುಳಿತಿದ್ದ.ರಷ್ಯಾದಲ್ಲಿ ನಡೆಯಲಿರುವ ಮಾಸ್ ರೆಸ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸಲು ಅವಿನಾಶ್ ಹೊರಟಿದ್ದಾರೆ. ಆದರೆ ಆರ್ಥಿಕ ಪರಿಸ್ಥಿತಿಯಿಂದ ಬಳಲುತ್ತಿರುವ ಅವರ ಕುಟುಂಬಕ್ಕೆ ರಷ್ಯಾಗೆ ತೆರಳಲು ಹಣ ಹೊಂದಿಸಲು ಕಷ್ಟವಾಗಿದೆ.
ತಂದೆಯ ಹೃದಯ ಮಗನಿಗಾಗಿ ಮಿಡಿಯಿತು. ಆದ್ದರಿಂದ ಅವನ ತಂದೆ ತನ್ನ ಮೂತ್ರಪಿಂಡವನ್ನು ಮಾರಾಟ ಮಾಡಿ ಮಗನನ್ನು ಕುಸ್ತಿಪಂದ್ಯಕ್ಕೆ ಕಳಿಸಲು ನಿರ್ಧರಿಸಿದ್ದಾರೆ.