ಕನ್ನಡ ವಾರ್ತೆಗಳು

ಕಳ್ಳರಿಗೆ ಕೈಕೊಟ್ಟ ಗ್ಯಾಸ್ ಕಟ್ಟರ್ : ಕೈಗೆ ಸಿಕ್ಕ ಚಿನ್ನ ದೋಚಿ ಪರಾರಿ.

Pinterest LinkedIn Tumblr

kadri_robed_photo_1

ಮಂಗಳೂರು,ನ.24: ಕದ್ರಿಯ ಶಿಲ್ಪಾ ಜ್ಯುವೆಲ್ಲರ್‍ಸ್‌ನಲ್ಲಿ ಚಿನ್ನಾಭರಣ ಕಳ್ಳತನ ನಡೆಸಿರುವ ಘಟನೆ ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ. ಕಳ್ಳರು ಸೇಫ್ ಲಾಕರ್‌ ಒಡೆಯಲು ತಂದಿದ್ದ ಗ್ಯಾಸ್‌ ಕಟ್ಟರ್‌ ಕೈಕೊಟ್ಟ ಕಾರಣ ದರೋಡೆ ತಪ್ಪಿದ್ದರೂ ಕೈಗೆ ಸಿಕ್ಕಿದ ಚಿನ್ನಾಭರಣಗಳೊಂದಿಗೆ ಕಳ್ಳರು ಪರಾರಿಯಾಗಿದ್ದು ,ಗ್ಯಾಸ್‌ ಕಟ್ಟರ್‌ನ್ನು ಸ್ಥಳದಲ್ಲೇ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ. ಶಿಲ್ಪಾ ಜ್ಯುವೆಲ್ಲರ್‍ಸ್ ‌ ಮಳಿಗೆಯ ಪಕ್ಕದ ಮೆನ್ಸ್‌ ಬ್ಯೂಟಿ ಪಾರ್ಲರ್‌ ಗೋಡೆಯನ್ನು ಕೊರೆದು ಕಳ್ಳರು ಚಿನ್ನದ ಅಂಗಡಿಗೆ ಒಳಪ್ರವೇಶಿಸಿದ್ದಾರೆ.

kadri_robed_photo_5 kadri_robed_photo_6 kadri_robed_photo_7 kadri_robed_photo_8 kadri_robed_photo_9 kadri_robed_photo_10

kadri_robed_photo_16 kadri_robed_photo_18

kadri_robed_photo_15 kadri_robed_photo_17 kadri_robed_photo_19 kadri_robed_photo_20

ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿದ್ದು ತನಿಖೆ ಮುಂದುವರಿದಿದೆ. ಶಿಲ್ಪಾ ಜ್ಯುವೆಲ್ಲರ್‍ಸ್‌ ಮಾಲಕ ನಾರಾಯಣ ಆಚಾರ್ಯ ಅವರು ಕದ್ರಿ ಠಾಣೆಗೆ ದೂರು ನೀಡಲಾಗಿದ್ದು ಕಳ್ಳರು ಕಳವುಮಾಡಲಾದ ಚಿನ್ನಾಭರಣಗಳ ಮೌಲ್ಯ ವೆಷ್ಟು ಎಂದು ಇನ್ನಷ್ಟೇ ತಿಳಿದು ಬರಬೇಕಾಗಿದೆ.

Write A Comment