ಕನ್ನಡ ವಾರ್ತೆಗಳು

ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯ

Pinterest LinkedIn Tumblr

aj_accident_photos_4

ಮಂಗಳೂರು,ನ.24: ರಸ್ತೆ ದಾಟಲು ನಿಂತಿದ್ದ ಯುವಕನಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ನಗರದ ಕುಂಟಿಕಾನದಲ್ಲಿ ರವಿವಾರ ಸಂಭವಿಸಿದೆ.

ದೇರೆಬೈಲು ಕೊಂಚಾಡಿಯ ನಿವಾಸಿ ಸುರೇಶ್‌ ಎಂಬವರು ಗಾಯಗೊಂಡವರಾಗಿದ್ದು ಕೆ‌ಎಸ್‌ಆರ್‌ಟಿಸಿಯ ಉದ್ಯೋಗಿಯಾಗಿದ್ದಾರೆ.

aj_car_photo_1 aj_car_photo_2 aj_car_photo_5 aj_car_photo_6 aj_car_photo_7 aj_car_photo_8

ಸುರೇಶ್‌ ಅವರು ಕೆ‌ಎಸ್‌ಆರ್‌ಟಸಿಯಲ್ಲಿ ಮೆಕಾನಿಕ್‌ ಆಗಿದ್ದು ಮಧ್ಯಾಹ್ನ ಕೆಲಸ ಮುಗಿಸಿಕೊಂಡು ಹೊರಗೆ ಬಂದು ಗೇಟ್‌ಬಳಿ ರಸ್ತೆ ದಾಟಲು ನಿಂತುಕೊಂಡಿದ್ದರು. ಇದೇ ಸಂದರ್ಭದಲ್ಲಿ ಕೆಪಿಟಿ ಕಡೆಯಿಂದ ವೇಗವಾಗಿ ಬಂದ ಕಾರು ಅವರಿಗೆ ಢಿಕ್ಕಿ ಹೊಡೆಯಿತು.

ಪರಿಣಾಮ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಕಾರು ಕೆ‌ಎಸ್‌ಆರ್‌ಟಿಸಿಯ ಗೋಡೆಗೆ ಹೊಡೆದಿದ್ದು ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಮಂಗಳೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment