ಕನ್ನಡ ವಾರ್ತೆಗಳು

ಭವಿಷ್ಯ ಕೇಳಲು ಬಂದ ಟೆಕ್ಕಿ ಮೇಲೆ ಲೈಂಗಿಕ ಕಿರುಕುಳ : ಕಪಟ ಜ್ಯೋತಿಷಿ ಪೊಲೀಸರ ವಶ.

Pinterest LinkedIn Tumblr

swami_arrest_tekki_asslut

ಬೆಂಗಳೂರು,ನ.22 : ತನ್ನ ಮದುವೆಯ ಬಗ್ಗೆ ಭವಿಷ್ಯ ಕೇಳಲು ಬಂದ 25 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ನಗರದ ಜ್ಯೋತಿಷಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.  ಹೊಯ್ಸಳ ನಗರದಲ್ಲಿ ಈ ಘಟನೆ ನಡೆದಿದ್ದು, ಎಲೆಕ್ಟ್ರಾನಿಕ್ ಸಿಟಿಯ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಯುವತಿ ಮೇಲೆ ತಮಿಳುನಾಡು ಮೂಲದ ಜ್ಯೋತಿಷಿ ದಾಮೋಧರನ್ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿದ್ದಾನೆ.

ಬುಧವಾರ ಯುವತಿ ತನ್ನ ಸ್ನೇಹಿತೆಯೊಂದಿಗೆ ಮದುವೆಯ ಕುರಿತು ಭವಿಷ್ಯ ಕೇಳಲು ದಾಮೋಧರನ್ ಬಳಿ ಹೋಗಿದ್ದಳು. ಈ ವೇಳೆ ಜ್ಯೋತಿಷಿ ತನ್ನ ಸ್ನೇಹಿತೆಯನ್ನು ಹೊರಗೆ ಕಳುಹಿಸಿ, ತನಗೆ ಕುಡಿಯಲು ತೀರ್ಥದಂತಹ ಪದಾರ್ಥ ನೀಡಿ, ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ರಾಮಮೂರ್ತಿನಗರ ಪೊಲೀಸರು ಜ್ಯೋತಿಷಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವ ವೇಳೆ ಜ್ಯೋತಿಷಿಯ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಹೇಳಿರುವ ಯುವತಿ, ಅತ್ಯಾಚಾರ ನಡೆಸಿದ ನಂತರ ಮತ್ತೆ ಮರುದಿನ ಬರುವಂತೆ ತನಗೆ ಒತ್ತಾಯ ಮಾಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

Write A Comment