ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಹಣ ಹಾಗೂ ಗೂಂಡಾಗಿರಿ ಶಕ್ತಿ ಉಪಯೋಗಿಸಿ ಉಪಚುನಾವಣೆಯನ್ನು ಅಕ್ರಮದಲ್ಲಿ ಗೆಲ್ಲುವ ಷಡ್ಯಂತ್ರವನ್ನು ಮಾಡುತ್ತಿದ್ದಾರೆ. ಜನತೆಗೆ ಅವರ ದಬ್ಬಾಳಿಕೆ, ಒತ್ತಡಗಳ ಹಾಗೂ ಅಕ್ರಮಗಳ ಅರಿವಿದೆ, ಜನತಂತ್ರ ವ್ಯವಸ್ಥೆಯಲ್ಲಿ ಈ ರೀತಿಯ ಪ್ರಕ್ರಿಯೆಗಳಿಗೆ ಅವಕಾಶವಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಅವರು ಶುಕ್ರವಾರ ಬೆಳಗ್ಗೆ, ರಾಜರಾಜೇಶ್ವರಿ ನಗರದ ಉಪಚುನಾವಣೆಯ ಅಂಗವಾಗಿ, ಬೆಂಗಳೂರು ನಗರ ಬಿಜೆಪಿ ಕಾರ್ಯಾಲಯ ದೇಶಪಾಂಡೆ ಭವನದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರನ್ನು ಅಕ್ರಮದಿಂದ ಮಣಿಸುವ ಈ ಕುಂತಂತ್ರದ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರನ್ನು ನೀಡಿದೆ.
ಸಂಸದ ಡಿ.ಕೆ ಸುರೇಶ್ ಇನ್ನು ಚುನಾವಣಾ ಕೊನೆಗೊಳ್ಳುವ ತನಕ ರಾಜರಾಜೇಶ್ವರಿ ನಗರದಲ್ಲಿ ಇರಬಾರದು ಹಾಗೂ ಸರಿಯಾದ ಪ್ರಜಾಪ್ರಭುತ್ವದ ಹಬ್ಬ ನಡಿಯಬೇಕು, ಅಕ್ರಮ-ದಬ್ಬಾಳಿಕೆಗಳು ಚುನಾವಣೆಯ ಮೇಲೆ ಪ್ರಭಾವ ಬೀರಬಾರದು ಎಂದು ಅವರು ಆಹ್ರಹಸಿದರು.
Comments are closed.