ರಾಷ್ಟ್ರೀಯ

ಬಿಜೆಪಿ ತೊರೆದಿದ್ದ ನಾಯಕನೇ, ಈಗ ಮೋದಿ ಗೆಲುವಿಗಾಗಿ ಶ್ರಮಿಸಿದರು!

Pinterest LinkedIn Tumblr


ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಗೆಲ್ಲಲು ಕೇವಲ ಅವರ ಹೆಸರೇ ಸಾಕಾಗಿತ್ತು. ಆದ್ರೂ ಚುನಾವಣಾ ಪ್ರಚಾರ ನಡೆಸಲು ಗುಜರಾತ್​​ ನಾಯಕರ ತಂಡದ ಮೇಲೆ ಅವರು ವಿಶ್ವಾಸವಿಟ್ಟಿದ್ದರು. ಇದೇ ನಾಯಕರಲ್ಲಿ ಒಬ್ಬರು ಹಿಂದೊಮ್ಮೆ ನರೇಂದ್ರ ಮೋದಿ ವಿರುದ್ಧದ ಭಿನ್ನಾಭಿಪ್ರಾಯದ ಕಾರಣ ಬಿಜೆಪಿಗೇ ಗುಡ್​​ಬೈ ಹೇಳಿದ್ದರು ಅನ್ನೋದು ಇಲ್ಲಿ ಇಂಟರೆಸ್ಟಿಂಗ್ ವಿಷಯ. 2007ರಲ್ಲಿ ಗುಜರಾತ್​ ವಿಧಾನಸಭಾ ಚುನಾವಣೆ ನಡೆಯಬೇಕಿತ್ತು. ಈ ವೇಳೆ ಭಾವನಗರ್​ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದ ಸುನಿಲ್​ ಅಹೋಜಾ ಪಕ್ಷಕ್ಕೆ ರಾಜೀನಾಮೆ ನೀಡಿ ಶಾಕ್​​ ನೀಡಿದ್ದರು. ಆದ್ರೆ, ಅಂದು ಯಾರು ತನ್ನನ್ನು ವಿರೋಧಿಸಿ ಬಿಜೆಪಿ ತೊರೆದಿದ್ದರೋ, ಅವರಿಗೇ ಈ ಬಾರಿ ತಮ್ಮ ಗೆಲುವಿನ ಹೊಣೆಯನ್ನು ಮೋದಿ ಹೊರಿಸಿದ್ದರು..!

ಹೌದು. ಬಿಜೆಪಿ ತ್ಯಜಿಸಿದ ನಂತರ ಸುನಿಲ್ ಅಹೋಜಾ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋಲನುಭವಿಸಿದ್ದರು. 2011ರಲ್ಲಿ ಅಹೋಜಾ ಬಿಜೆಪಿಗೆ ವಾಪಸ್ಸಾಗಿ, ಮೋದಿಯ ಅತ್ಯಾಪ್ತ ಹಾಗೂ ವಿಶ್ವಾಸಾರ್ಹ ನಾಯಕರಲ್ಲಿ ಒಬ್ಬರಾದ್ರು. ಮೋದಿ ಹಾಗೂ ಅಮಿತ್​ ಶಾ, ಅಹೋಜಾ ಅವರನ್ನ ಉತ್ತರಪ್ರದೇಶದ ಪ್ರದೇಶ ಸಹ ಉಸ್ತುವಾರಿಯನ್ನಾಗಿ ಮಾಡಿದ್ರು. ಹೀಗಾಗಿ ಅಹೋಜಾ 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲುವಿನ ಸೂತ್ರಧಾರಿಯಾಗಿದ್ರು.

ಸುನಿಲ್ ಅಹೋಜಾ ನೇತೃತ್ವದ ಗುಜರಾತ್​​ನ ತಂಡ ವಾರಣಾಸಿಯಲ್ಲಿ ಮೋದಿ ಪರ ಚುನಾವಣಾ ಪ್ರಚಾರ ನಡೆಸಿತು. ಮೋದಿ ಗೆಲ್ಲಲು ಅವರ ಹಸರೇ ಸಾಕಿತ್ತು ನಿಜ, ಆದ್ರೆ ಅವರ ಸಂಸದೀಯ ಕ್ಷೇತ್ರದಲ್ಲಿ ಸರ್ಕಾರದ ನೀತಿಗಳನ್ನ ಜನರಿಗೆ ತಲುಪಿಸುವುದು ಹಾಗೂ ಎಲೆಕ್ಷನ್​ ಅಜೆಂಡಾ ಸೆಟ್​ ಮಾಡಲು ಗ್ರೌಂಡ್​​ವರ್ಕ್​ ಮಾಡುವಲ್ಲಿ ಅಹೋಜಾ ಅವರ ಪಾತ್ರ ಪ್ರಮುಖವಾದುದು. ಇವರ ಜೊತೆಗೆ ಮೋದಿಯ ಚುನಾವಣಾ ಏಜೆಂಟ್​ ವಿದ್ಯಾಸಾಗರ್​ ಕೂಡ ಮೋದಿಗಾಗಿ ದುಡಿದರು. ಮೋದಿ ಗೆಲುವಿನ ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್​​ರಿಂದ ಮೋದಿ ಅವರ ಪ್ರಮಾಣಪತ್ರವನ್ನೂ ಕೂಡ ವಿದ್ಯಾಸಾಗರ್​ ಅವರೇ ಸ್ವೀಕರಿಸಿದ್ರು. ಬಳಿಕ ನಾಯಕರ ಜೊತೆಗೂಡಿ ಪ್ರಮಾಣಪತ್ರವನ್ನು ನವದೆಹಲಿಗೆ ತೆಗದುಕೊಂಡು ಹೋಗಿ ಮೋದಿಗೆ ಹಸ್ತಾಂತರಿಸಿದರು. ಇನ್ನು ಎಂಎಲ್​ಸಿ ಲಕ್ಷ್ಮಣ್​​ ಆಚಾರ್ಯ, ಸಚಿವ ನೀಲಕಂಠ್​​ ತಿವಾರಿ ಕೂಡ ವಾರಣಾಸಿಯಲ್ಲಿ ಮೋದಿಗಾಗಿ ದುಡಿದಿದ್ದಾರೆ.

ಈ ಬಗ್ಗೆ ಮಾತನಾಡಿರೋ ಅಹೋಜಾ, ವಾರಣಾಸಿಯಲ್ಲಿ ಮೋದಿ ಗೆಲ್ಲುವಲ್ಲಿ ನನ್ನ ಪಾತ್ರವೇನೂ ಇಲ್ಲ, ನಾನು ಸೂತ್ರಧಾರನೂ ಅಲ್ಲ. ಮೋದಿಯ ಹೆಸರು ಕೇಳಿಯೇ ಜನ ವೋಟ್​ ಹಾಕ್ತಾರೆ. ನಾನು ಕೇವಲ ಒಬ್ಬ ಸಾಮಾನ್ಯ ಕಾರ್ಯಕರ್ತ ಅಂತಾರೆ.

Comments are closed.