
ಬೆಂಗಳೂರು: ಜೆಡಿಎಸ್ ಪಕ್ಷದಲ್ಲಿ ಯಾರೂ ಬೇಕಾದರೂ ಟಿಕೆಟ್ ಕೇಳಬಹು ದು. ಟಿಕೆಟ್ ಬೇಕು ಎಂದು ಪ್ರಜ್ವಲ್ ಅಪೇಕ್ಷೆ ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಶನಿವಾರ ಹೇಳಿದರು.
ರಾಜರಾಜೇಶ್ವರಿ ನಗರದಿಂದ ಪ್ರಜ್ವಲ್ ಸ್ಫರ್ಧೆ ಬಗ್ಗೆ ಚಿಂತನೆ ನಡೆಯುತ್ತಿದೆ. ಈ ಬಗ್ಗೆ ಪಕ್ಷ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದರು. ಯಡಿಯೂರಪ್ಪ ಟೀಕೆಗೆ ಉತ್ತರಿಸಿದ ಕುಮಾರಸ್ವಾಮಿ, ಮೈತ್ರಿ ಸರಕಾರದಲ್ಲಿ 20 ತಿಂಗಳ ಸಾಧನೆ ಕ್ರೆಡಿಟ್ ನನ್ನದು.
ಬೇಕಿದ್ದರೆ ಎಲ್ಲಾ ಸಾಧನೆ ತನ್ನದೆಂದು ಯಡಿಯೂರಪ್ಪ ಹೇಳಿಕೊಳ್ಳಲಿ, ಅದರೊಂದಿಗೆ ಜೈಲಿಗೆ ಹೋಗಿ ಬಂದ ವಿಷಯವನ್ನೂ ಸೇರಿಸಲಿ ಎಂದು ಟಾಂಗ್ ನೀಡಿದರು.
Comments are closed.