ಕರ್ನಾಟಕ

ಹುತಾತ್ಮ ಕಮಾಂಡೋ ಕುಟುಂಬಕ್ಕೆ 60 ಲಕ್ಷ ರು.ಪರಿಹಾರ

Pinterest LinkedIn Tumblr


ಬೀದರ್‌: ನಕ್ಸಲ್‌ ನಿಗ್ರಹದ ಹೋರಾಟದಲ್ಲಿ ಹುತಾತ್ಮರಾದ ಕಮಾಂಡೋ ಸುಶೀಲ್ ಕುಮಾರ್ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಶನಿವಾರ ಮೆಥೊಡಿಕ್ ಚರ್ಚ್ ಬಳಿಯ ಸ್ಮಶಾನದಲ್ಲಿ ನೆರವೇರಿತು.

ಇದಕ್ಕೂ ಮುನ್ನ ಚರ್ಚ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಡಿಸಿ ಹೆಚ್.ಮಹದೇವ, ಎಸ್ಪಿ ಡಿ.ದೇವರಾಜ್, ಸಂಗಾರೆಡ್ಡಿ ಎಸ್ಪಿ, ಗಣ್ಯರು, ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು. ಕನ್ನಡಿಗ ಸುಶೀಲ್ ಕುಮಾರ್‌ ಕುಟುಂಬಕ್ಕೆ 60ಲಕ್ಷ ರು. ಪರಿಹಾರ ಹಾಗೂ ಅಂತ್ಯಕ್ರಿಯೆಗೆ 3 ಲಕ್ಷ ನಗದು ಹಣವನ್ನು ತೆಲಂಗಾಣ ಸರಕಾರ ನೀಡಿದೆ.

ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದ ಹಾಗೂ ಹುತಾತ್ಮರಿಗೆ ಗೌರವ ನೀಡದ ಸರಕಾರದ ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ.

Comments are closed.