ರಾಷ್ಟ್ರೀಯ

‘ಆ್ಯಕ್ಟ್ ಈಸ್ಟ್’ ಪಾಲಿಸಿ ಬೆಂಬಲಿಸಿದ್ದಕ್ಕೆ ಧನ್ಯವಾದ ಅರ್ಪಿಸಿದ ಮೋದಿ

Pinterest LinkedIn Tumblr


ದೆಹಲಿ: ಮೇಘಾಲಯ, ನಾಗಾಲ್ಯಾಂಡ್ ಮತ್ತು ತ್ರಿಪುರಾ ಜನರು ಮಾತನಾಡು ತ್ತಾರೆ! ಎಂದಿರುವ ಪ್ರಧಾನಿ ಮೋದಿ, ಉತ್ತಮ ಆಡಳಿತ ಕಾರ್ಯಸೂಚಿ ಹಾಗೂ ‘ಆ್ಯಕ್ಟ್ ಈಸ್ಟ್ ಪಾಲಿಸಿ’ ಹೊಂದಿರುವ ಬಿಜೆಪಿ ಮತ್ತು ಮಿತ್ರಪಕ್ಷಗಳನ್ನು ಬೆಂಬಲಿಸಿದ ರಾಜ್ಯಗಳ ಜನರಿಗೆ ಧನ್ಯವಾದ ಹೇಳುತ್ತೇನೆ. ಜನರ ಕನಸು ಮತ್ತು ಆಕಾಂಕ್ಷೆಗಳನ್ನು ನೆರವೇರಿಸುವಲ್ಲಿ ನಾವು ಶ್ರಮಿಸುತ್ತೇವೆ’ ಎಂದು ಟ್ವೀಟ್ ಮಾಡಿದ್ದಾರೆ.

ಈಶಾನ್ಯ ರಾಜ್ಯದ ಪ್ರಜೆಗಳ ಕನಸುಗಳು ಮತ್ತು ಆಕಾಂಕ್ಷೆ ಈಡೇರಿಸಲು ಪಕ್ಷ ಬದ್ಧ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೂರು ಈಶಾನ್ಯ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ‘ಉತ್ತಮ ಆಡಳಿತದ ಕಾರ್ಯಸೂಚಿ’ಗೆ ಬೆಂಬಲಿಸಿದ ಜನರಿಗೆ ಅಭಿನಂದನೆ ಗಳು ಎಂದು ಕೃತಜ್ಞತೆ ಸಲ್ಲಿಸಿದರು.

ತ್ರಿಪುರದ ನನ್ನ ಸಹೋದರಿಯರು ಮತ್ತು ಸಹೋದರರು ಮಾಡಿರುವ ಸಾಧನೆ ಅಸಾಮಾನ್ಯವಾಗಿದೆ. ಬಿಜೆಪಿಗೆ ನೀಡಿರುವ ಅಸಾಧಾರಣ ಬೆಂಬಲಕ್ಕೆ ಧನ್ಯವಾದ ಹೇಳಲು ಪದಗಳಿಲ್ಲ. ತ್ರಿಪುರಾವನ್ನು ಪರಿವರ್ತಿಸುವಲ್ಲಿ ಇದೊಂದು ಮೈಲಿಕಲ್ಲು ಎಂದಿ ದ್ದಾರೆ. ‘ತ್ರಿಪುರದಲ್ಲಿನ ಐತಿಹಾಸಿಕ ಗೆಲುವು ವಿವೇಚನಾರಹಿತ ಶಕ್ತಿ ಮತ್ತು ಬೆದರಿಕೆಯ ವಿರುದ್ಧ ಪ್ರಜಾಪ್ರಭುತ್ವಕ್ಕೆ ಸಂದ ಗೆಲು ವಾಗಿದೆ ಎಂದರು.

Comments are closed.