ಉಡುಪಿ: ಕರಾವಳಿ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಷಾ ಇಂದು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ನವಗ್ರಹ ಕಿಂಡಿ ಮೂಲಕ ಕೃಷ್ಣನ ದರುಶನ ಪಡೆದರು. ಮುಂಜಾನೆ ಅಗಮಿಸಿ ಷಾ ರನ್ನು ಪರ್ಯಾಯ ಶ್ರೀ ಪಾದರು ಬರಮಾಡಿಕೊಂಡರು. ಕೃಷ್ಣನ ದರುಶನ ಪಡೆದ ಅಮಿತ್ ಷಾ ಶ್ರೀಗಳಿಗೆ ತುಳಸಿ ಮಾಲೆ ಹಾಗೂ ಶಾಲು ಹೊದಿಸಿ ಗೌರವಿಸಿದರು.
ಇದೇ ಸಂಧರ್ಭದಲ್ಲಿ ಪಲಿಮಾರು ಶ್ರೀಗಳು ಕೃಷ್ಣ ಮಠದ ಗೋಪುರದ ಮಾದರಿಯನ್ನು ನೆನಪಿನ ಕಾಣಿಕೆಯಾಗಿ ನೀಡಿ ಆಶಿರ್ವಾದಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಷಾ ನಾನು ಶ್ರಿಕೃಷ್ಣನ ದರುಷನ ಹಾಗೂ ಶ್ರೀ ಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ.ನವಗ್ರಹ ಕಿಂಡಿಮೂಲಕ ಕೃಷ್ಣನ ದರುಶನ ಪಡೆದದ್ದು ನನ್ನ ಸೌಭಾಗ್ಯ ಎಂದರು.
ಆಶೀರ್ವಾದ ನೀಡಿದ ಪಲಿಮಾರು ಶ್ರೀಗಳು ಗುಜರಾತ್ ಹಾಗೂ ಕರ್ನಾಟಕಕ್ಕೆ ಅವಿನಾಭಾವ ಸಂಬಂಧವಿದೆ, ದ್ವಾರಕೆಯಿಂದಲೇ ತಿಲಕ ಕೃಷ್ಣ ಮಠಕ್ಕೆ ಬರುತ್ತೆ .ಕೃಷ್ಣನೇ ನಿಮ್ಮನ್ನ ಇಲ್ಲಿಗೆ ಕರೆಸಿಕೊಂಡಿದ್ದಾನೆ.ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಮಲದ ವಿಕಾಸವಾಗಲಿ,ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಂಕಲ್ಪ ಇಡೇರಿಲಿ ಎಂದು ಅನುಗ್ರಹ ಸಂದೇಶವನ್ನು ನೀಡಿದ್ರು.
Comments are closed.