ಕರಾವಳಿ

ಬೈಂದೂರು: 94ಸಿ ಅರ್ಜಿದಾರರ ಹಕ್ಕುಪತ್ರಕ್ಕಾಗಿ ಬೃಹತ್ ಪ್ರತಿಭಟನೆ

Pinterest LinkedIn Tumblr

ಕುಂದಾಪುರ: ಭೂಕಂದಾಯ ಕಾಯಿದೆ 1964 ಅನ್ವಯ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ವಾಸವಾಗಿದ್ದು, 94ಸಿ ಅರ್ಜಿದಾರರಿಗೆ ಕೂಡಲೇ ಹಕ್ಕು ಪತ್ರ ಕೊಡಲು ಒತ್ತಾಯಿಸಿ ಬೈಂದೂರು ವಿಶೇಷ ತಹಶೀಲ್ದಾರ್ ಕಛೇರಿ ಎದುರು ಬೃಹತ್ ಪ್ರತಿಭಟನಾ ಮುಷ್ಕರ ನಡೆಯಿತು.

Byndoor_94C_Protest (1) Byndoor_94C_Protest (2) Byndoor_94C_Protest (3) Byndoor_94C_Protest (4) Byndoor_94C_Protest (5) Byndoor_94C_Protest (6) Byndoor_94C_Protest (7)

ಬೈಂದೂರು ವಿಶೇಷ ಉಪತಹಶೀಲ್ದಾರ್ ಆದ ಶಂಕರ್ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ರಾಜ್ಯ ಅಧ್ಯಕ್ಷರಾದ ಕಾಂ. ನಿತ್ಯಾನಂದಸ್ವಾಮಿ, ಕೃಷಿಕೂಲಿಕಾರರ ಸಂಘದ ಮುಖಂಡರಾದ ವೆಂಕಟೇಶ ಕೋಣಿ, ಕೆ.ಶಂಕರ್, ಬಾಲಕೃಷ್ಣ ಶೆಟ್ಟಿ, ಸುರೇಶ್ ಕಲ್ಲಾಗರ, ರಾಜೀವ ಪಡುಕೋಣೆ , ಗಣೇಶ ತೊಂಡೆಮಕ್ಕಿ, ನಾಗರತ್ನ ನಾಡ, ಶೀಲಾವತಿ, ಮುತ್ತ ಮಾರ್ಕೊಡು ಸ್ಥಳೀಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹಾಬಲ ಕೊಠಾರಿ ಉಪಸ್ಥಿತರಿದ್ದರು.

Comments are closed.