ಕರ್ನಾಟಕ

ಫೇಲ್ ಆಗಿದ್ದಕ್ಕೆ ನೇಣಿಗೆ ಶರಣಾದ ಇಬ್ಬರು ವಿದ್ಯಾರ್ಥಿನಿಯರು

Pinterest LinkedIn Tumblr

suicide

ಮಂಡ್ಯ/ರಾಯಚೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಹಿನ್ನೆಲೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಡ್ಯ ಜಿಲ್ಲೆಯ ಕೀಲಾರ ಗ್ರಾಮದ ಎಂಇಎಂ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಜಾನ್ಹವಿ ಮತ್ತು ರಾಯಚೂರು ಜಿಲ್ಲೆಯ ಮುದಗಲ್ ನ ಮೇಗಳಪೇಟೆ ನಿವಾಸಿ ಸವಿತಾ ಬಾವಿಕಟ್ಟಿ ಮೃತ ವಿದ್ಯಾರ್ಥಿನಿಯರು.

ಸವಿತಾ ಬಾವಿಕಟ್ಟಿಸೋಮವಾರ ಅಂತರ್ಜಾಲದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಫಲಿತಾಂಶ ನೋಡಿದ ಜಾನ್ಹವಿ ಮತ್ತು ಸವಿತಾ ಬಾವಿಕಟ್ಟಿ ಅನುತ್ತೀರ್ಣ ಎಂದು ತಿಳಿದು ಅಘಾತಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಮಂಡ್ಯ ಜಿಲ್ಲೆಯ ಚಿನ್ನನದೊಡ್ಡಿ ಗ್ರಾಮದಲ್ಲಿ ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಹತಾಶೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ವಳಗೆರೆದೊಡ್ಡಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕವನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡು ಅನುತ್ತೀರ್ಣಗೊಂಡ ಹಿನ್ನೆಲೆಯಲ್ಲಿ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮನೆಯಲ್ಲಿದ್ದ ಪೋಷಕರು ತಕ್ಷಣ ಗಮನಿಸಿ ಮಂಡ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Write A Comment