ಪಟನಾ: ಕೊಲೆ ಪ್ರಕರಣವೊಂದರ ಸಾಕ್ಷಿಯನ್ನು ಬೆದರಿಸಿದ ಆರೋಪದ ಮೇಲೆ ಬಂಧಿಸಲಾಗಿದ್ದ, ಜೆಡಿಯು ಶಾಸಕಿ ಭೀಮಾ ಭಾರ್ತಿ ಅವರ ಪತಿ ಅವದೇಶ್ ಮಂಡಲ್ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಸಿ ಲಾಕಪ್ನಿಂದ ಪರಾರಿಯಾಗಿದ್ದಾನೆ.
ಸೋಮವಾರ ಅವದೇಶ್ನನ್ನು ಪೊಲೀಸರು ಬಂಧಿಸಿ ಪೊಲೀಸ್ ಸ್ನೇಷನ್ನ ಲಾಕಪ್ನಲ್ಲಿರಿಸಿದ್ದರು. ತನ್ನ ಪತಿಯನ್ನು ಭೇಟಿಯಾಗಲು ಶಾಸಕಿ ಭೀಮಾ ಭಾರ್ತಿ ಪೊಲೀಸ್ ಸ್ಟೇಷನ್ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರಿಗೆ ಯಾಮಾರಿಸಿ ಅವದೇಶ್ ಪರಾರಿಯಾಗಿದ್ದಾನೆ ಎಂದು ಪುರ್ನಿಯಾ ಎಸ್ಪಿ ನಿಶಾಂತ್ ಕುಮಾರ್ ತಿವಾರಿ ತಿಳಿಸಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ಅವದೇಶ್ನ ನೂರಾರು ಬೆಂಬಲಿಗರು ಪೊಲೀಸ್ ಸ್ಟೇಷನ್ ಬಳಿ ಜಮಾಯಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅವದೇಶ್ ಕುಖ್ಯಾತ ಪಾತಕಿಯಾಗಿದ್ದು, ಅವನ ಮೇಲೆ ಕೊಲೆ, ದರೋಡೆ ಸೇರಿದಂತೆ ಸುಮಾರು 100 ಹೆಚ್ಚು ಪ್ರಕರಣಗಳು ದಾಖಲಾಗಿವೆ.