UAE

ದುಬೈಗರನ್ನು ನಕ್ಕುನಗಿಸಲು ಕಾತುರರಾಗಿದ್ದಾರೆ ಮಾಸ್ಟರ್ ಹಿರಣ್ಣಯ್ಯ: ರಾಜ್ಯೋತ್ಸವ-ನಗೆಹಬ್ಬಕ್ಕೆ ಕ್ಷಣಗಣನೆ

Pinterest LinkedIn Tumblr
IMG_4880
ದುಬೈ, ಡಿ.20: ದುಬೈಯ ಅಲ್ ನಾಸರ್ ಲೀಸರ್‌ಲ್ಯಾಂಡ್ ನಶ್ವನ್ ಹಾಲ್‌ನಲ್ಲಿ ಯುಎಇಯ ದುಬೈ ಕನ್ನಡಿಗರು ಆಯೋಜಿಸಿರುವ ಕರ್ನಾಟಕ ರಾಜ್ಯೋತ್ಸವ ಮತ್ತು ನಗೆಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ.
IMG_4858
IMG_4712
IMG_4699
IMG_4705
IMG_4684
ಕಾರ್ಯಕ್ರಮದಲ್ಲಿ ಭಾಗವಹಿಸಲು ಖ್ಯಾತ ಕಲಾವಿದರು, ಹಾಸ್ಯಲೋಕದ ದಿಗ್ಗಜರು ಆಗಿರುವ ಮಾಸ್ಟರ್ ಹಿರಣ್ಣಯ್ಯ, ಅವರ ಪುತ್ರ ನರಸಿಂಹ, ಪ್ರೋ.ಕೃಷ್ಣೇಗೌಡ, ಇಂದೂಮತಿ ಸಾಲಿಮತ್, ರವಿ ಭಜಂತ್ರಿ ಸೇರಿದಂತೆ ಇನ್ನಿತರ ಕಲಾವಿದರು ಈಗಾಗಲೇ ದುಬೈಯಲ್ಲಿ ಬೀಡುಬಿಟ್ಟಿದ್ದಾರೆ.
IMG_4815
10 ಸಾವಿರ ಪ್ರದರ್ಶನ ಕಾಣುವ ಮೂಲಕ ರಂಗಭೂಮಿಯಲ್ಲಿ ಇತಿಹಾಸ ನಿರ್ಮಿಸಿರುವ ಮಾಸ್ಟರ್ ಹಿರಿಣ್ಣಯ್ಯರ ‘ಲಂಚಾವತಾರ’ ನಾಟಕದ ತುಣಕುಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುವುದು. ಜೊತೆಗೆ ಮಾಸ್ಟರ್ ಹಿರಣ್ಣಯ್ಯ ತನ್ನ ಹಾಸ್ಯ ಚಟಾಕಿಗಳನ್ನು ಸಿಡಿಸುವ ಮೂಲಕ ಕಾರ್ಯಕ್ರಮದಲ್ಲಿ ನಗೆಯ ಹೊನಲನ್ನು ಹರಿಸಲಿದ್ದಾರೆ.
IMG_4881
ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಾನಪದ ಪರಿಷತ್, ಜಾನಪದ ಲೋಕದ ಸಹಯೋಗದೊಂದಿಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಸಂಸದ ಜನಾದನ ಸ್ವಾಮಿ ಕೂಡಾ ಭಾಗವಹಿಸಲು ಆಗಮಿಸಿದ್ದಾರೆ.
IMG_4906\
IMG_4776
ಸಂಜೆ 5 ಗಂಟೆಗೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದೆ ಜಸ್ಮಿತಾ ವಿವೇಕ್ ತಂಡದವರಿಂದ ನೃತ್ಯ, ಶಿವಕುಮಾರ್ ತಂಡದವರಿಂದ ಸಂಗೀತ ಕಾರ್ಯಕ್ರಮ ಕೂಡಾ ನಡೆಲಿದೆ.
Kannadigaru Dubai UAe Flyer copy.eps

Write A Comment