ಕರಾವಳಿ

ಬಿ.ಜಿ. ಮೋಹನದಾಸ್ ಸೇರಿ ಉಡುಪಿ ಮೂಲದ ಐವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Pinterest LinkedIn Tumblr

ಉಡುಪಿ: ರಾಜ್ಯ ಸರ್ಕಾರ 2019ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸೋಮವಾರ ಪ್ರಕಟಿಸಿದ್ದು ಉಡುಪಿ ಮೂಲದ ಬೀಜಿ ಮೋಹನ್ ದಾಸ್ ಅವರಿಗೆ ಹೊರನಾಡು, ಕ್ರೀಡಾ ವಿಭಾಗದಿಂದ ಫವರ್ ಲಿಫ್ಟರ್ ವಿಜಯ್ ಭಾಸ್ಕರ್ ಗಾಣಿಗ, ವೈದ್ಯಕೀಯ ವಿಭಾಗದಲ್ಲಿ ಡಾ. ಕೃಷ್ಣ ಪ್ರಸಾದ, ಚಿತ್ರಕಲೆಯಿಂದ ಯು. ರಮೇಶ್ ರಾವ್ ಹಾಗೂ ಸಂಕೀರ್ಣ ವಿಭಾಗದಲ್ಲಿ ಎಂ.ಆರ್.ಜಿ.ಗ್ರೂಪ್ ಅಧ್ಯಕ್ಷ ಕೆ.ಪ್ರಕಾಶಶೆಟ್ಟಿ ಸೇರಿ ಐದು ಮಂದಿ ಉಡುಪಿಯ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

(ಬೀಜಿ ಮೋಹನ್ ದಾಸ್, ವಿಜಯ್ ಭಾಸ್ಕರ್ ಗಾಣಿಗ, ಡಾ. ಕೃಷ್ಣ ಪ್ರಸಾದ,  ಎಂ.ಆರ್.ಜಿ.ಗ್ರೂಪ್ ಅಧ್ಯಕ್ಷ ಕೆ.ಪ್ರಕಾಶಶೆಟ್ಟಿ, ಯು. ರಮೇಶ್ ರಾವ್ )

ಬಿ.ಜಿ. ಮೋಹನ್ ದಾಸ್

ಬಿಜೂರು ಗೋವಿಂದಪ್ಪ ಮೋಹನ್ ದಾಸ್ ರವರು ತಮ್ಮ ಗೆಳೆಯರಿಗೆಲ್ಲಾ “ಬೀಜಿ”ಎಂದೇ ಪರಿಚಿತರಾಗಿದ್ದಾರೆ. ಜನರ ಸೇವೆಯೇ ಜನಾರ್ಧನ ಸೇವೆ ಎಂಬ ತತ್ವವನ್ನು ಬಲವಾಗಿ ನಂಬಿರುವ ಬೀಜಿಯವರ ವ್ಯಕ್ವಿತ್ವವನ್ನು ರೂಪಿಸುವಲ್ಲಿ ಮಣಿಪಾಲದ ಕೊಡುಗೆಯು ಅಪಾರವಾದದ್ದು. ಎಂಭತ್ತರ ದಶಕದಲ್ಲಿ ಕೊಲ್ಲಿ ರಾಷ್ಟ್ರಕ್ಕೆ ವಲಸೆ ಹೋದ “ಮಣಿಪಾಲದ ಬೀಜಿಯವರು” ಫಾರ್ಮಸಿಯ ವಿವಿಧ ಸಂಸ್ಥೆಗಳಲ್ಲಿ ಕಳೆದ ಮೂವತೈದು ವರ್ಷಗಳಿಂದ ಅವಿರತವಾಗಿ ದುಡಿದಿದ್ದು ತಮ್ಮ ಬಿಡುವಿನ ವೇಲೆಯಲ್ಲಿ ಅಧಿಕ ಸಮಯವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದಾರೆ.
ಮಣಿಪಾಲದಿಂದ ಫಾರ್ಮಸಿ ವಿಭಾಗದಲ್ಲಿ ಸ್ನಾತಕೋತರ ಪದವಿ ಪಡೆದಿರುವ ಬೀಜಿಯವರು ಗಲ್ಫ್‌ನಾಡಿಗೆ ವಲಸೆ ಬರುವ ಮುನ್ನ ಮಣಿಪಾಲದಲ್ಲಿ ಫಾರ್ಮಸಿ ವಿಭಾಗದ ಸಹಾಯಕ ಪ್ರೊಪೆಸರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

1985ರಲ್ಲಿ ದುಬೈ ಕರ್ನಾಟಕ ಸಂಘದ ಸಂಸ್ಥಾಪಕರ ಬಳಗ ಸೇರಿ ಮುಂದೆ 1988 ರಲ್ಲಿ ಸಂಘದ ಸಂವಿಧಾನ ರೂಪಿಸಿದ ರೂವಾರಿಗಳಲ್ಲೊಬ್ಬರಾದರು. 1989 ರಲ್ಲಿ ದುಬೈ ಕರ್ನಾಟಕ ಸಂಘದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಸಾಂವಿಧಾನಿಕವಾಗಿ ಚುನಾಯಿತರಾದ ಅಧ್ಯಕ್ಷರಾದರು. ಇವರ ಅಧ್ಯಕ್ಷತೆಯಲ್ಲಿ ಹಲವು ಪ್ರತಿಭೆಗಳು ಅರಳಲು ಅವಕಾಶ ದೊರಕಿತು. ಇವರ ಸ್ಪೂರ್ತಿದಾಯಕ ಮಾರ್ಗದರ್ಶನದಿಂದಾಗಿ ಮನೋರಂಜನೆ ಹಾಗೂ ಆಟೋಟ ಚಟುವಟಿಕೆಗಳ ಬುಗ್ಗೆಯೇ ಹರಿಯಿತು. 1992-94 ರವರೆಗೆ ಕಾರ್ಯದರ್ಶಿಯಾಗಿಯೂ 1996-98ರ ವರೆಗೆ ಉಪಾಧ್ಯಕ್ಷರಾಗಿ ದುಬೈ ಕರ್ನಾಟಕ ಸಂಘದಲ್ಲಿ ಸೇವೆ ಸಲ್ಲಿಸಿರುವ ಯು.ಎ. ಇ ಇಂಡಿಯನ್ ಫಾರ್ಮಾಸ್ಯೂಟಿಕಲ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಗಲ್ಪ್ ರಾಷ್ಟ್ರಗಳಲ್ಲಾಗುವ ಕನ್ನಡ ಚಟುವಟಿಕೆಗಳನ್ನು ಪ್ರತಿಬಿಂಬಿಸಿ ಕರ್ನಾಟಕ ಮತ್ತು ಕೊಲ್ಲಿ ರಾಷ್ಟ್ರಗಳ ನಡುವಣ ಸೇತುವೆಯಾದ ಉದಯವಾಣಿ ದಿನಪತ್ರಿಕೆಯ ‘ಗಲ್ಪ್ ವಾರ್ತಾ ಸಂಚಯ’ಅಂಕಣ ವನ್ನು ಪ್ರಾರಂಭಿಸುವಲ್ಲಿ ಪ್ರೇರಣೆಯಾದರು. ಗಲ್ಪ್ ಕನ್ನಡಿಗರ ಅಭಿಮಾನಕ್ಕೆ ಸಾಂಸ್ಕೃತಿಕ ಶ್ರ್ರೀಮಂತಿಕೆಗೆ ಕನ್ನಡಿಯಾದ ಈ ಅಂಕಣವು ಬೀಜಿಯವರು ಕನ್ನಡ ಬಾಂಧವರಿಗಿತ್ತ ಒಂದು ಅತ್ಯಮೂಲ್ಯ ಕೊಡುಗೆ.
ಬೀಜಿಯವರ ಸಾರ್ಥಕ ಸೇವೆಯನ್ನು ಪರಿಗಣಿಸಿ ಶಾರ್ಜಾ ಕರ್ನಾಟಕ ಸಂಘ 2007 ರ ಪ್ರತಿಷ್ಟಿತ- ’ಮಯೂರ ಪ್ರಶಸ್ತಿ’ ಯನ್ನು ನೀಡಿ ಸನ್ಮಾನಿಸಿದೆ.
ತಮ್ಮ ಜೀವನದ್ದುದ್ದಕ್ಕೂ ಪ್ರಶಸ್ತಿಗಳನ್ನು ಪಡೆಯುತ್ತಾ ಬಂದಿರುವ ಬೀಜಿಯವರನ್ನು 2002 ರಲ್ಲಿ ಮಣಿಪಾಲ ವಿಶ್ವವಿದ್ಯಾಲಯವು ತನ್ನ ಅತ್ಯುನ್ನತ ಪ್ರಶಸ್ತಿಯಾದ ‘ಅತ್ಯುತ್ತಮ ಪೂರ್ವ ವಿದ್ಯಾರ್ಥಿ’ ಪ್ರಶಸ್ತಿಯೊಂದಿಗೆ ಸನ್ಮಾನಿಸಿದೆ. ಹಾಗೆಯೇ ನ.14 2008 ರಂದು ಬಹರೈನ್ ಕನ್ನಡ ಸಂಘದ ಅದ್ದೂರಿಯ ಕಾರ್ಯಕ್ರಮ “ಕನ್ನಡ ವೈಭವ” ದಲ್ಲಿ ಮುಖ್ಯ ಅತಿಥಿ ಕರ್ನಾಟಕ ಮುಖ್ಯ ಮಂತ್ರಿ ಬಿ.ಎಸ್. ಯಡಿಯುರಪ್ಪನವರಿಂದ ಕನ್ನಡ ಸೇವೆಗಾಗಿ ನಮ್ಮ ’ಬೀಜಿ’ಯವರು ಸನ್ಮಾನಿತರಾದರು. ಅಂತೆಯೇ ಯು.ಎ.ಯಿಯ ಪ್ರತಿಷ್ಟ ಕನ್ನಡ ಸಂಸ್ಥೆ ಅಬುದಾಭಿ ಕರ್ನಾಟಕ ಸಂಘ ಆಯೋಜಿಸಿದ ರಾಜ್ಯೋತ್ಸವ 2009 ರಲ್ಲಿಯೂ ಸನ್ಮಾನಿತರಾದರು. ’ಧ್ವನಿ ಪತಿಷ್ಠಾನ ತನ್ನ ಬೆಳ್ಳಿಹಬ್ಬದ ಪ್ರಯುಕ್ತ ವಿಜ್ರಂಭ್ರಂಣೆಯಿಂದ ಆಯೋಜಿಸಿದ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಹೊಸ ಹವ್ಯಾಸ ’ ಕನ್ನಡ ಪತ್ರಿಕೋದ್ಯಮ’ ಸಾಧನೆಯನ್ನು ಗುರುತಿಸಿ ಸನ್ಮಾನಿತರಾದರು. ಹಾಗೆಯೇ ಯು.ಎ.ಯಿಯ ಪ್ರತಿಷ್ಟ ಕನ್ನಡ ಸಂಸ್ಥೆ ಅಬುದಾಭಿ ಕರ್ನಾಟಕ ಸಂಘ ಆಯೋಜಿಸಿದ ಪ್ರಥಮ ’ ದ. ರಾ. ಬೇಂದ್ರೆ ಪ್ರಶಸ್ತಿ ’ ಯ ಪ್ರಥಮ ವಿಜೇತರಾಗಿ ಸನ್ಮಾನಿತರಾದರು.
ತಮ್ಮ ಮನೆತನವಾದ ದೇವಾಡಿಗ ಸಮುದಾಯಕ್ಕೂ ಹತ್ತು ಹಲವು ರೀತಿಯಲ್ಲಿ ಸಹಾಯ ನೀಡಿರುವ ಬೀಜಿಯವರು ದೇವಾಡಿಗ ಸಂಘ ಯು.ಎ.ಇ ಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಅಂತರ್ಜಾಲ ತಾಣ ದೇವಾಡಿಗ.ಕಾಂ ಕಾರ್ಯನಿರ್ವಾಹಣೆಯಲ್ಲೂ ತಮ್ಮ ಶ್ರಮದಾನ ನೀಡುತ್ತಿದ್ದಾರೆ. ಇನ್ನೊಂದು ತಾಣವಾದ ಕೊಲ್ಲೂರು.ಕಾಮ್ ನಿರ್ಮಾಣದಲ್ಲೂ ತಮ್ಮ ಯೋಗದಾನ ನೀಡಿದ್ದಾರೆ.
ಅವರನ್ನು ಮುಂಬೈ ದೇವಾಡಿಗ ಸಂಘ ’ ದೇವಾಡಿಗ ಭೂಷಣ’ ಎಂದು ಸನ್ಮಾನ ಮಾಡಿದೆ.
ಇತ್ತಿಚೆಗೆ ಕಾಂತಾವರ ಕನ್ನಡ ಸಂಘ ಅವರ ಸಾಧನೆಗಳನ್ನು ’ ಗಲ್ಫ್ ಕನ್ನಡಿಗ – ಬಿ.ಜಿ.ಮೋಹನ್ ದಾಸ್ ’–ಎಂಬ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ.
ಊರಿಗೆ ವಾಪಾಸ್ ಬಂದು (2014) ಮಣಿಪಾಲದಲ್ಲಿ ನೆಲಸಿರುವ ಬೀಜಿ ಯವರು ಮಣಿಪಾಲ ಲಯನ್ಸ್ ಸೇರಿ ಅದರ ಅದ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಆಂಗ್ಲ ಭಾಷೆಯ ಮೇಲೆ ಅಪ್ರತಿಮ ಹಿಡಿತವಿರುವ ಬೀಜಿಯವರು ಉತ್ತಮ ಅಂಕಣಕಾರರೂ ಆಗಿದ್ದಾರೆ. ಬೀಡುವಿನ ವೇಳೆಯಲ್ಲಿ ಹಲವು ಅಂತರ್ಜಾಲ ತಾಣಗಳನ್ನು ಜಾಲಾಡುವುದು ಮಾತ್ರವಲ್ಲದೇ ಕೆಲವು ತಾಣಗಳನ್ನು ಹೊರಡಿಸುತ್ತಲೂ ಇದ್ದಾರೆ.
ಪರಿಚಿತರಲ್ಲಿ ಆತ್ಮೀಯ ಸ್ನೇಹಿತರಾಗಿ, ಪ್ರಾಮಾಣಿಕರಾಗಿ, ಸಹಾನುಭೂತಿ ತೋರುವ ಸಹೃದಯಿ ಬೀಜಿಯವರು ತಮ್ಮ ಸ್ನೇಹಿತರಿಂದಲೂ ಬೀಜಿ ಎಂದೇ ಕರೆಸಿಕೊಳ್ಳಲು ಇಷ್ಟಪಡುತ್ತಾರೆ. ಕನ್ನಡ ಪರ ಸಂಘಟನೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಗಲ್ಪ್ ನಾಡಿನಲ್ಲಿರುವ ಕನ್ನಡ ಬಾಂದವರ ಏಳ್ಗೆಯ ಬಗ್ಗೆ ಬರೆಯ ಮಾತುಗಳನ್ನು ಮಾತ್ರ ಆಡದೆ ಕೃತಿಯಲ್ಲಿ ಇಳಿಸಿ ಜನಮನ ಗೆದ್ದಿದ್ದಾರೆ.
ಪತ್ನಿ ಯಶೋದಾ, ಪುತ್ರ ಅಖಿಲ್ ಹಾಗೂ ಪುತ್ರಿ ಯಶಸ್ವಿ ಯವರನ್ನೊಡಗೂಡಿದ ಚಿಕ್ಕದಾದ ಸುಖೀ ಸಂಸಾರ ಬೀಜಿಯವರದ್ದು.
ಇಂಗ್ಲಿಷ್ ಭಾಷೆಯ ಪ್ರಾವೀಣ್ಯವನ್ನು ಮೆರೆದಿದ್ದರೆ ಬೇರೆಲ್ಲೂ ಹೋಗಿ ತಲುಪಬಹುದಾಗಿದ್ದ ಬೀಜಿಯವರ ಕನ್ನಡ ಕಳಕಳಿ ಗಲ್ಪ್ ನಾಡಿನಲ್ಲಿ ಕನ್ನಡ ಅರಳಲು ಸಹಕಾರಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಅವರು ಕಳೆದ 40 ವರ್ಷಗಳಿಂದ ಸಲ್ಲಿಸಿದ ಈ ಸಾರ್ಥಕ ಸೇವೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಯುವಕರ ಮೇಲಿದೆ.

ವಿಶ್ವನಾಥ್ ಭಾಸ್ಕರ್ ಗಾಣಿಗ..
ವಿಶ್ವನಾಥ ಭಾಸ್ಕರ್ ಗಾಣಿಗ ಅವರದ್ದು ಉಡುಪಿಯ ಕುಂದಾಪುರ ತಾಲ್ಲೂಕಿನ ದೇವಲಕುಂದದ ಬಾಳಿಕೆರೆ ಗ್ರಾಮ. ತಂದೆ ಭಾಸ್ಕರ್ ಗಾಣಿಗ, ತಾಯಿ ಪದ್ಮಾವತಿ

1st to 4th ತರಗತಿ ಬಳ್ಳಾರಿಯಲ್ಲಿ
5th to 7th ನೆಂಪು ಕಿರಿಯ ಪ್ರಾಥಮಿಕ ಶಾಲೆಯಲ್ಲಿ
8th to 12th ನೆಂಪು ಹಿರಿಯ ಪ್ರಾಥಮಿಕ / ಹಾಗು ಪದವಿಪೂರ್ವ ಕಾಲೇಜು ನಲ್ಲಿ
BCA ಪದವಿಯನ್ನು ಭಂಡಾರ್ಕರ್’ಸ್ ಕಾಲೇಜು ಕುಂದಾಪುರದಲ್ಲಿ
MS in IT ಜೈನ ಕಾಲೇಜು ಬೆಂಗಳೂರು.

ಸಾಧನೆಗಳು
1.2019 ಕೆನಡಾ ದಲ್ಲಿ ಸೆಪ್ಟೆಂಬರ್ 15 ರಿಂದ 22 ರ ವರೆಗೆ ನಡೆದ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ 1 ಚಿನ್ನ ಪದಕ ಪಡೆದಿರುತ್ತಾರೆ.
2.2019 ಕೆನಡಾ ದಲ್ಲಿ ಸೆಪ್ಟೆಂಬರ್ 15 ರಿಂದ 22 ರ ವರೆಗೆ ನಡೆದ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ 327.5kg ಭಾರ ಎತ್ತುವ ಮೂಲಕ ವರ್ಷದ ಹಳೆ ದಾಖಲೆ ಭಾರತದ ಹೆಸರಿಗೆ ಮಾಡಿರುತ್ತಾರೆ
3 .2017 ಸೌತ್ ಆಫ್ರಿಕಾ ದಲ್ಲಿ 09 ರಿಂದ 17 ರ ವರೆಗೆ ನಡೆದ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ 1 ಚಿನ್ನ ಪದಕ ಪಡೆದಿರುತ್ತಾರೆ.
4.2017 ಸೌತ್ ಆಫ್ರಿಕಾ ದಲ್ಲಿ 09 ರಿಂದ 17 ರ ವರೆಗೆ ನಡೆದ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ 1 ಬೆಳ್ಳಿಯ ಪದಕ ಪಡೆದಿರುತ್ತಾರೆ.
5. 2017 ರ ಡಿಸೆಂಬರ್ 4 ರಿಂದ 9 ರ ವರೆಗೆ ಕೇರಳದಲ್ಲಿ ನಡೆದ ಏಶಿಯನ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ನಲ್ಲಿ ಸೀನಿಯರ್ ವಿಭಾದಲ್ಲಿ ಡೆಡ್ ಲಿಫ್ಟ್ ನಲ್ಲಿ ಚಿನ್ನ ಹಾಗು ಪವರ್ ಲಿಫ್ಟಿಂಗ್ ನಲ್ಲಿ ಬೆಳ್ಳಿಯ ಪದಕ ಪಡೆದಿರುತ್ತಾರೆ
6 . 2016 ಡಿಸೆಂಬರ್ 24 ರಿಂದ 27 ರವರೆಗೆ ಜಮಶೇಡ್ಪುರ ದಲ್ಲಿ ನಡೆದ ಸುಬ್ರತಾ ಕ್ಲಾಸಿಕ್ ಇಂಟರ್ನ್ಯಾಷನಲ್ ಪವರ್ ಲಿಫ್ಟಿಂಗ್ ನಲ್ಲಿ 1 ಚಿನ್ನದ ಪದಕ ಹಾಗು ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ನಲ್ಲಿ ಬಲಿಷ್ಠ ಪುರುಷ 2016 ಪ್ರಶಸ್ತಿ ಪಡೆದಿರುತ್ತಾರೆ .
7 . 2016 ಡಿಸೆಂಬರ್ 24 ರಿಂದ 27 ರವರೆಗೆ ಜಮಶೇಡ್ಪುರ ದಲ್ಲಿ ನಡೆದ ಸುಬ್ರತಾ ಕ್ಲಾಸಿಕ್ ಇಂಟರ್ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್ಲಿಫ್ಟ್ ನಲ್ಲಿ 1 ಚಿನ್ನದ ಪದಕ ಹಾಗು ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಡೆಡ್ನ ಲಿಫ್ಟ್ ನಲ್ಲಿ ಬಲಿಷ್ಠ ಪುರುಷ 2016 ಪ್ರಶಸ್ತಿ ಪಡೆದಿರುತ್ತಾರೆ.
8 . 2012 ರ ಡಿಸೆಂಬರ್ 10 ರಿಂದ 14 ರ ವರೆಗೆ ತಮಿಳುನಾಡಿನಲ್ಲಿ ನಡೆದ ಏಶಿಯನ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ನಲ್ಲಿ ಕಂಚಿನ ಪದಕ ಪಡೆದಿರುತ್ತಾರೆ .
9 .ಜೆರಾಯ್ ಸ್ಟ್ರಾಂಗ್ ಮ್ಯಾನ್ ಆಫ್ ಇಂಡಿಯಾ 2016 ಪ್ರಶಸ್ತಿ ವಿಜೇತ.
10 .ಜೆರಾಯ್ ಸ್ಟ್ರಾಂಗ್ ಮ್ಯಾನ್ ಆಫ್ ಇಂಡಿಯಾ 2017 ಪ್ರಶಸ್ತಿ ವಿಜೇತ
11. 2019 ಆಗಸ್ಟ್ 22 ರಿಂದ 25 ರ ವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್ನ ಲಿಫ್ಟಿಂಗ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ.
12. 2019 ಆಗಸ್ಟ್ 22 ರಿಂದ 25 ರ ವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಇಂಟೆರ್ ಸ್ಟೇಟ್ ಪವರ್ ಲಿಫ್ಟಿಂಗ್ ನಲ್ಲಿ 1 ಕಂಚಿನ ಪದಕ ಪಡೆದಿರುತ್ತಾರೆ
13.2018 ರ ಸಪ್ಟೆಂಬರ್ 26 ರಿಂದ 30 ರ ವರೆಗೆ ಲಕ್ನೋ ದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ
14.ಇವರು 2017 ಜಮ್ಮುವಿನಲ್ಲಿ ಮಾರ್ಚ್ 22 ರಿಂದ 27 ರ ವರೆಗೆ ನಡೆದ ಫೆಡರೇಷನ್ ಕಪ್ ಪವರ್ ಲಿಫ್ಟಿಂಗ್ ನಲ್ಲಿ 1 ಚಿನ್ನ ಹಾಗು ಬಲಿಷ್ಠ ಪುರುಷ ದ್ವಿತೀಯ ಸ್ಥಾನ ಪಡೆದಿರುತ್ತಾರೆ .
15.ಇವರು 2017 ಜಮ್ಮುವಿನಲ್ಲಿ ಮಾರ್ಚ್ 22 ರಿಂದ 27 ರ ವರೆಗೆ ನಡೆದ ಕ್ಲಾಸಿಕ್ ಪವರ್ ಲಿಫ್ಟಿಂಗ್ ಡೆಡ್ ಲಿಫ್ಟ್ ನಲ್ಲಿ 1 ಚಿನ್ನ ಹಾಗು ಬಲಿಷ್ಠ ಪುರುಷ ಪ್ರಶಸ್ತಿ ಪಡೆದಿರುತ್ತಾರೆ .
16. ಇವರು 2017 ಜಮ್ಮುವಿನಲ್ಲಿ ಮಾರ್ಚ್ 22 ರಿಂದ 27 ರ ವರೆಗೆ ನಡೆದ ಕ್ಲಾಸಿಕ್ ಪವರ್ ಲಿಫ್ಟಿಂಗ್ ನಲ್ಲಿ 1 ಬೆಳ್ಳಿಯ ಪದಕ ಪಡೆದಿರುತ್ತಾರೆ.
17. ಇವರು 2016 ರ ಸಪ್ಟೆಂಬರ್ 7 ರಿಂದ 11 ರ ವರೆಗೆ ಜಮಶೇಡ್ಪುರದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್ ಲಿಫ್ಟ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ .
18. 2016 ರ ಸಪ್ಟೆಂಬರ್ 7 ರಿಂದ 11 ರ ವರೆಗೆ ಜಮಶೇಡ್ಪುರದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಇಂಟೆರ್ ಸ್ಟೇಟ್ ಪವರ್ ಲಿಫ್ಟಿಂಗ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ
19. 2016 ರ ಸಪ್ಟೆಂಬರ್ 7 ರಿಂದ 11 ರ ವರೆಗೆ ಜಮಶೇಡ್ಪುರದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ನಲ್ಲಿ 1 ಬೆಳ್ಳಿಯ ಪದಕ ಪಡೆದಿರುತ್ತಾರೆ .
20. ಜಮಶೇಡ್ಪುರ್ ನಲ್ಲಿ ಮಾರ್ಚ್ 24 ರಿಂದ 27 ರ ವರೆಗೆ ನಡೆದ ಫೆಡರೇಷನ್ ಕಪ್ ಪವರ್ ಲಿಫ್ಟಿಂಗ್ ನಲ್ಲಿ 1 ಚಿನ್ನ ಹಾಗು ಬಲಿಷ್ಠ ಪುರುಷ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
21. ಜಮಶೇಡ್ಪುರ್ ನಲ್ಲಿ ಮಾರ್ಚ್ 24 ರಿಂದ 27 ರ ವರೆಗೆ ನಡೆದ ಸೀನಿಯರ್ ಪವರ್ ಲಿಫ್ಟಿಂಗ್ ಡೆಡ್ ಲಿಫ್ಟ್ ನಲ್ಲಿ 1 ಚಿನ್ನ ಹಾಗು ಬಲಿಷ್ಠ ಪುರುಷ ಪ್ರಶಸ್ತಿ ಪಡೆದಿರುತ್ತಾರೆ .
22. ಕೇರಳದ ಅಲೀಪ್ಪಿ ನಲ್ಲಿ ಆಗಸ್ಟ್ 14 ರಿಂದ 19 ರ ವರೆಗೇನಡೆದ ಸೀನಿಯರ್ ನ್ಯಾಷನಲ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ.
23.ಜಮಶೇಡ್ಪುರ್ ನಲ್ಲಿ ಮಾರ್ಚ್ 24 ರಿಂದ 27 ರ ವರೆಗೆ ನಡೆದ ಜೂನಿಯರ್ ಪವರ್ ಲಿಫ್ಟಿಂಗ್ ಡೆಡ್ ಲಿಫ್ಟ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ .
24. ಹಿಮಾಚಲ ಪ್ರದೇಶದಲ್ಲಿ ಜನವರಿ 4 ರಿಂದ 9 ರ ವರೆಗೆ ನಡೆದ ಕ್ಲಾಸಿಕ್ ಪವರ್ ಲಿಫ್ಟಿಂಗ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ .
25.ಹಿಮಾಚಲ ಪ್ರದೇಶದಲ್ಲಿ ಜನವರಿ 4 ರಿಂದ 9 ರ ವರೆಗೆ ನಡೆದ ಜೂನಿಯರ್ ಪವರ್ ಲಿಫ್ಟಿಂಗ್ ನಲ್ಲಿ 1 ಕಂಚಿನ ಪದಕ ಹಾಗು ಡೆಡ್ ಲಿಫ್ಟ್ ನಲ್ಲಿ 300 ಕೆ.ಜಿ ಭಾರ ಎತ್ತಿ ನೂತನ ದಾಖಲೆ ಮಾಡಿರುತ್ತಾರೆ .
26. ಅಮರಾವತಿಯಲ್ಲಿ 2013 ರ ಜನವರಿ 24 ರಿಂದ 30 ರ ವರೆಗೆ ನಡೆದ ಜೂನಿಯರ್ ನ್ಯಾಷನಲ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ.
27. ಅಮರಾವತಿಯಲ್ಲಿ 2013 ರ ಜನವರಿ 24 ರಿಂದ 30 ರ ವರೆಗೆ ನಡೆದ ಜೂನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್ ಲಿಫ್ಟ್ ನಲ್ಲಿ 287.5 ಕೆ.ಜಿ ಭಾರ ಎತ್ತಿ ನೂತನ ದಾಖಲೆ ಮಾಡಿರುತ್ತಾರೆ .
28. 2013 ಮಂಗಳೂರಿನಲ್ಲಿ ಆಗಸ್ಟ್ 21 ರಿಂದ 26 ರ ವರೆಗೆ ನಡೆದ ಸೀನಿಯರ್ ನ್ಯಾಷನಲ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ.
29.2013 ಮಂಗಳೂರಿನಲ್ಲಿ ಆಗಸ್ಟ್ 21 ರಿಂದ 26 ರ ವರೆಗೆ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್ನ ಲಿಫ್ಟಿಂಗ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ.
30. 2013 ಜಮಶೇಡ್ಪುರ್ ನಲ್ಲಿ ಏಪ್ರಿಲ್ 10 ರಿಂದ 14 ರ ವರೆಗೆ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್ ಲಿಫ್ಟಿಂಗ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ .
31. 2013 ಜಮಶೇಡ್ಪುರ್ ನಲ್ಲಿ ಏಪ್ರಿಲ್ 10 ರಿಂದ 14 ರ ವರೆಗೆ ನಡೆದ ಜೂನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್ ಲಿಫ್ಟಿಂಗ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ .
32. 2012 ಹಿಮಾಚಲ ಪ್ರದೇಶದಲ್ಲಿ ಮಾರ್ಚ್ 28 ರಿಂದ ಏಪ್ರಿಲ್ 1 ವರೆಗೆ ನಡೆದ ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್ ಲಿಫ್ಟಿಂಗ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ .
33. 2011 ತಮಿಳ್ನಾಡಿನಲ್ಲಿ ಜನವರಿ 20 ರಿಂದ 23 ರ ವರೆಗೆ ನಡೆದ ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್ ಲಿಫ್ಟಿಂಗ್ ನಲ್ಲಿ 1 ಬೆಳ್ಳಿಯ ಪದಕ ಪಡೆದಿರುತ್ತಾರೆ .
34. ಇವರು ಒಟ್ಟು 5 ಚಿನ್ನದ ಪದಕ , 3 ಬೆಳ್ಳಿಯ ಪದಕ ಹಾಗು 3 ಕಂಚಿನ ಪದಕ ಅಂತಾರಾಷ್ತ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ ಯಲ್ಲಿ, ಹಾಗೆಯೆ 18 ಚಿನ್ನದ ಪದಕ , 5 ಬೆಳ್ಳಿಯ ಪದಕ ಹಾಗು 3 ಕಂಚಿನ ಪದಕವನ್ನು ರಾಷ್ಟೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪಡೆದಿರುತ್ತಾರೆ.

Comments are closed.