ಕರಾವಳಿ

ಗೋಕಳ್ಳರಿಂದ ಜಾನುವಾರು ಕಳೆದುಕೊಂಡ ಮಹಿಳೆಗೆ ‘ಗೋ ದಾನ’ ಮಾಡಿದ ಉಳ್ತೂರು ಯುವಕರು..! (Video)

Pinterest LinkedIn Tumblr

ಕುಂದಾಪುರ: ಗೋ ಕಳ್ಳರಿಂದ ಗಬ್ಬದ ಹಸುವನ್ನು ಕಳಕೊಂಡಿದ್ದ ಮಹಿಳೆಗೆ ಮತ್ತೊಂದು ಗಬ್ಬದ ಹಸುವನ್ನು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಉಳ್ತೂರಿನ ಯುವಕರು ನೀಡಿದ್ದಾರೆ.

ಉಳ್ತೂರು ಶ್ರೀ ಮಹಾತೋಬಾರ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಗೋ ಪೂಜೆ ನೆರವೇರಿಸಿ ಗೋವನ್ನು ಸುಮಿತ್ರಾ ಆಚಾರ್ಯರಿಗೆ ಹಸ್ತಾಂತರಿಸಲಾಯಿತು. ಉಳ್ತೂರಿನ ಗ್ರಾಮಸ್ತರು, ನಮ್ಮ ಉಳ್ತೂರು ಬಳಗ, ಯುವಕ ಮಂಡದವರೆಲ್ಲರೂ ಸೇರಿ ಈ ಮಹಾನ್ ಕಾರ್ಯ ಮಾಡಿರುವ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಕರಣದ ಹಿನ್ನೆಲೆ….
ಸುಮಾರು ಒಂದೂವರೆ ವರ್ಷಗಳ ಹಿಂದೆ ಕುಂದಾಪುರ ತಾಲೂಕಿನ ಉಳ್ತೂರು ಗ್ರಾಮದಲ್ಲಿ ದೇವಸ್ಥಾನದ ವಠಾರದಲ್ಲಿ ಮಲಗುತ್ತಿದ್ದ ಗೋವುಗಳನ್ನು ಕದಿಯಲು ಬಂದಿದ್ದ ಕಳ್ಳರ ತಂಡ ದೇವಸ್ಥಾನದ ಕಮಾನಿನ ಪಕ್ಕದಲ್ಲಿದ್ದ ಸುಮಿತ್ರ ಆಚಾರ್ಯರ ಕೊಟ್ಟಿಗೆಗೆ ನುಗ್ಗಿ ಗಬ್ಬದ ಹಸು ಕದ್ದಿದ್ದರು. ಈ ಪ್ರಕರಣವನ್ನು ಖಂಡಿಸಿ, ಹಿಂದೂ ಪರ ಸಂಘಟನೆಯ ಮುಖಂಡ ಅವಿನಾಶ್ ಉಳ್ತೂರು ನೇತೃತ್ವದಲ್ಲಿ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ಪ್ರತಿಭಟನೆಯೂ ನಡೆದಿತ್ತು. ಆದರೆ ಆರೋಪಿಗಳ ಪತ್ತೆ ಈವರೆಗೂ ಆಗಿಲ್ಲ.

(ವರದಿ- ಯೋಗೀಶ್ ಕುಂಭಾಸಿ)

 

Comments are closed.