ಕರಾವಳಿ

‘ಮತ್ತೆ ಶಾಸಕ ಆಗುತ್ತಾರೆ’-ಮಾಜಿ ಶಾಸಕ ಗೋಪಾಲ ಪೂಜಾರಿಯ ಭವಿಷ್ಯ ನುಡಿದ ವಿನಯ್ ಗುರೂಜಿ (Video)

Pinterest LinkedIn Tumblr

ಕುಂದಾಪುರ: ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿಯವರ ಕಟ್ ಬೆಲ್ತೂರಿನ ನಿವಾಸಕ್ಕೆ ಶ್ರಂಗೇರಿ ಗೌರಿಗದ್ದೆಯ ಅವದೂತ ವಿನಯ್ ಗುರೂಜಿ ಭೇಟಿ ನೀಡಿದರು.

ಈ ಸಂದರ್ಭ ಅವದೂತರನ್ನು ಗೋಪಾಲ ಪೂಜಾರಿ ದಂಪತಿಗಳು ಮತ್ತು ಕುಟುಂಬಿಕರು ಬರಮಾಡಿಕೊಂಡಿದ್ದು ಅವದೂತರು ಈ ಸಂದರ್ಭ ನೆರೆದ ಭಕ್ತರನ್ನು ಹರಸಿದ್ದು ಮಾಜಿ ಶಾಸಕ ಗೋಪಾಲ ಪೂಜಾರಿಯವರ ಸರಳತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾಲ್ಕು ಬಾರಿ ಅಧಿಕಾರ ಇದ್ದಾಗಲೂ ಸರಳತೆ ಇದ್ದ ಅವರು ಯೋಗ ಮತ್ತು ಯೋಗ್ಯತೆ ಮೂಲಕ ಮತ್ತೆ ಶಾಸಕ ಆಗುತ್ತಾರೆ ಎಂದು ಭವಿಷ್ಯ ನುಡಿದರು.

ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾದ ರಾಜು ದೇವಾಡಿಗ, ಜಗದೀಶ್ ದೇವಾಡಿಗ, ಸಹಕಾರಿ ದುರೀಣ ರಾಜು ಪೂಜಾರಿ, ಆನಗಳ್ಳಿ ಶ್ರೀ ದತ್ತಾಶ್ರಮದ ಪ್ರವರ್ತಕ ಸುಭಾಶ್ ಪೂಜಾರಿ, ಧಾರ್ಮಿಕ ಮುಖಂಡ ಹರೀಶ್ ತೋಳಾರ್ ಕೊಲ್ಲೂರು ಇದ್ದರು.

Comments are closed.