ಕರಾವಳಿ

ಮತ್ತೆ ಗೋಕಳ್ಳರ ಅಟ್ಟಹಾಸ: ಅಂಪಾರು ಪೆಟ್ರೋಲ್ ಪಂಪ್ ಎದುರಿದ್ದ ದನ ಕಳವು (Video)

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮತ್ತೆ ಗೋಕಳ್ಳರ ಅಟ್ಟಹಾಸ ಹೆಚ್ಚಿದೆ. ಕುಂದಾಪುರ ತಾಲೂಕಿನ ಅಂಪಾರು ಎಂಬಲ್ಲಿನ ಪೆಟ್ರೋಲ್ ಬಂಕ್ ಬಳಿಯಿದ್ದ ಜಾನುವಾರನ್ನು ಕಾರಿನಲ್ಲಿ ತುಂಬಿಸಿ ಕದ್ದುಹೋದ ಘಟನೆ ಬೆಳಕಿಗೆ ಬಂದಿದ್ದು ಈ ಕುಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಕುಂದಾಪುರ-ಸಿದ್ದಾಪುರ ಹೆದ್ದಾರಿಯ ಸಮೀಪವೇ ಇರುವ ಅಂಪಾರು ಪೆಟ್ರೋಲ್ ಬಂಕಿನಲ್ಲಿ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪೆಟ್ರೋಲ್ ಬಂಕ್ ಎದುರು ಕಾರೊಂದು ನಿಂತಿದ್ದು ಕಾರಿನಿಂದ ಇಳಿದ ಇಬ್ಬರು ದುಷ್ಕರ್ಮಿಗಳು ಬಂಕ್ ಎದುರು ಮಲಗಿದ್ದ ದನವನ್ನು ಹಿಡಿದು ಕಾರಿನಲ್ಲಿ ತುಂಬಿಸಿ ಕ್ಷಣಾರ್ಧದಲ್ಲಿ ಅಲ್ಲಿಂದ ಪರಾರಿಯಾಗುತ್ತಾರೆ. ಸುಮಾರು 2-3 ನಿಮಿಷಗಳ ಅಂತರದಲ್ಲಿ ಈ ಕಳ್ಳತನ ನಡೇದಿರುವುದು ಬೆಳಕಿಗೆ ಬಂದಿದ್ದು ಗೋಕಳ್ಳರನ್ನು ಕಂಡು ಕೂಗಿದ ನಾಯಿಯೊಂದಕ್ಕೆ ಕಳ್ಳರು ಹೊಡೆದು ಅಟ್ಟಿಸುವುದು ಕೂಡ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಬಗ್ಗೆ ಜಾನುವಾರು ಕಳೆದುಕೊಂಡ ಕೃಷಿಕ ಪ್ರಸನ್ನ ಕುಮಾರ್ ಶೆಟ್ಟಿ ಎನ್ನುವರು ದೂರು ನೀಡಿದ್ದಾರೆ.

ಪ್ರಕರಣದ ದಾಖಲಿಸಿಕೊಂಡ ಶಂಕರನಾರಾಯಣ ಠಾಣೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Comments are closed.