ಹೈದರಾಬಾದ್: ಹಾಡುಹಗಲೇ ಪೊಲೀಸರ ಕಣ್ಣೆದುರೇ ಜನಗಂಗುಳಿಯ ನಡುವೆ ವ್ಯಕ್ತಿಯೊಬ್ಬನನ್ನು ಕೊಡಲಿಯಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
https://youtu.be/lKycXDSr1NY
ಹೈದರಾಬಾದ್ನ ರಾಜೇಂದ್ರ ನಗರದಲ್ಲಿ ಇಬ್ಬರು ದುಷ್ಕರ್ಮಿಗಳು ವ್ಯಕ್ತಿಯನ್ನು ಅಟ್ಟಾಡಿಸಿಕೊಂಡು ಬಂದು ಆತ ಪ್ರಜ್ಞಾಹೀನನಾಗುವವರೆಗೂ ಕೊಚ್ಚಿರುವುದನ್ನು ದಾರಿಹೋಕರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಘಟನೆ ನಡೆಯುವ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ತಡೆಯಲು ಮುಂದಾಗಿರುವುದು ಮತ್ತು ಭಯದಿಂದ ಹಿಂದೆ ಸರಿದಿರುವುದೂ ವಿಡಿಯೋದಲ್ಲಿ ದಾಖಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.
ಘಟನೆ ನಡೆದಾಗ ಮೂವರು ಪೊಲೀಸರು ಸ್ಥಳದಲ್ಲೇ ಇದ್ದರು. ಆದರೂ ಅವರಿಂದ ಕೃತ್ಯ ನಿಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಆದರೆ ಇಬ್ಬರು ಪೊಲೀಸರು ಆತನನ್ನು ತಡೆಯಲು ಲಾಠಿ ತರಲು ತೆರಳಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ದ್ವೇಷದ ಕೊಲೆ
ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ಮಹೇಶ್ ಗೌಡ್ ಕೊಲೆಯ ಪ್ರಮುಖ ಆರೋಪಿಯಾದ ರಮೇಶ್ ಎಂಬಾತನನ್ನು, ಮಹೇಶ್ ಗೌಡ್ ತಂದೆ ಕೃಷ್ಣಾ ಗೌಡ್ ಮತ್ತು ಚಿಕ್ಕಪ್ಪ ಲಕ್ಷ್ಮಣ್ ಗೌಡ್ ನೂರಾರು ಜನರ ಮುಂದೆಯೇ ಕೊಲೆ ಮಾಡಿದ್ದಾರೆ.
Comments are closed.