ಕರಾವಳಿ

ಹಿಟ್&ರನ್: ಭೀಕರ ಅಪಘಾತದಲ್ಲಿ ಪಾದಾಚಾರಿ ಸಾವು, ಇನ್ನೋರ್ವ ಗಂಭೀರ (Video)

Pinterest LinkedIn Tumblr

ಕುಂದಾಪುರ: ಟೆಂಪೋ ಡಿಕ್ಕಿ‌ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಕುಂದಾಪುರ ತಾಲೂಕಿನ ತ್ರಾಸಿ ಬಳಿಯ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ನಿನ್ನೆ ತಡ ರಾತ್ರಿ ಘಟನೆ ನಡೆದಿದೆ.

ಡಿಕ್ಕಿ ಹೊಡೆದ ಟೆಂಪೊ ಪರಾರಿಯಾಗಿದ್ದು,ಮೃತದೇಹ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮುಂಜಾನೆ ಪತ್ತೆಯಾಗಿದೆ.

ಮೃತ ವ್ಯಕ್ತಿ ನಾವುಂದ ಮೂಲದ ಪ್ರಭಾಕರ್ ಎನ್ನುವರಾಗಿದ್ದು, ಕುಂದಾಪುರ ಹೋಟೇಲಿನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇನ್ನೋರ್ವ ವ್ಯಕ್ತಿ ಸುರೇಶ್ ಪೂಜಾರಿ ಅವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗಂಗೊಳ್ಳಿ ಠಾಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Comments are closed.