ಕರಾವಳಿ

ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಗುಣಗಾನ ಮಾಡಿದ ನಟ ಪ್ರಥಮ್! (Video)

Pinterest LinkedIn Tumblr

ಕುಂದಾಪುರ: ಗುರುವಾರ ಮಧ್ಯಾಹ್ನದ ಸುಮಾರಿಗೆ ಕುಂದಾಪುರದ ಮಾಜಿ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತಾಲೂಕಿನ ವಕ್ವಾಡಿಯ ಶ್ರೀ ನಂದಿಕೇಶ್ವರ ದೈವಸ್ಥಾನಕ್ಕೆ ಆಗಮಿಸಿದ್ದರು. ಇವರನ್ನು ಗುರುತಿಸಿದ ಕಳೆದ ಸೀಸನ್ ಬಿಗ್ ಬಾಸ್ ವಿನ್ನರ್ ಹಾಗೂ ನಟ ಪ್ರಥಮ್ ಅವರನ್ನು ಎಲ್ಲಾ ಕಲಾವಿದರಿಗೆ ಪರಿಚಯಿಸಿದರು.

ಬಳಿಕ ಅವರೊಂದಿಗೆ ಮಾತಗಿಳಿದು, ಪಕ್ಷೇತರವಾಗಿ ಸ್ಪರ್ಧಿಸಿ ದೊಡ್ಡ ಅಂತರದಲ್ಲಿ ಗೆಲ್ಲುವುದು ಸುಲಭದ ಮಾತಲ್ಲ. ನಿವೊಬ್ಬರು ಜನಾನುರಾಗಿ ಶಾಸಕರಗಿದ್ದೀರಿ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಹಾಲಾಡಿ, ಎಲ್ಲಾ ಜನರ ಆಶಿರ್ವಾದ ಎನ್ನುವಾಗಲೇ ಜನರನ್ನುದ್ದೇಶಿಸಿ ಮಾತನಾಡಿದ ಪ್ರಥಮ್ ಮುಂದಿನ ಬಾರಿ ನನ್ನನ್ನು ಸಂಸದನಾಗಿ ಮಾಡಿ, ಸದ್ಯ ಯಾರಿಲ್ಲಿ ಸಂಸದರು ಎಂದು ಪ್ರಶ್ನಿಸಿದರು. ಶೋಭಾ ಕರಂದ್ಲಾಜೆ ಎಂದು ಜನ ಹೇಳಿದಾಗ ಅವರಿದ್ದರೇನು? ನಾನಿದ್ದರೇನು? ಎಂದು ಹಾಸ್ಯ ಚಟಾಕಿ ಹಾರಿಸಿದರು.

Comments are closed.