ಕರಾವಳಿ

ಸಚಿವ ಪ್ರಮೋದ್ ಸರ್..ಸರ್.. ಎಂದು ಕರೆದರೂ ಸಿಎಂ ಮಾತ್ರ ನಿದ್ದೆಯಲ್ಲಿದ್ದರು! (Video)

Pinterest LinkedIn Tumblr

ಉಡುಪಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಹಗಲು ಹೊತ್ತಲ್ಲಿ ಅಲ್ಲಲ್ಲಿ ನಿದ್ರೆಯಲ್ಲಿರುತ್ತಾರೆಂಬುದು ಇದೀಗಾ ಎಲ್ಲೆಡೆ ನಡೆಯುತ್ತಿರುವ ವಿದ್ಯಾಮಾನ. ಬಹಳಷ್ಟು ಓಡಾಟ, ಕಾರ್ಯಕ್ರಮಗಳ ಒತ್ತಡಗಳ ನಡುವೆ ಇದೆಲ್ಲಾ ಮಾಮೂಲಿ ಎಂಬುದು ಅವರ ಪಕ್ಷದವರ ಸ್ಪಷ್ಟನೆಯೂ ಹೌದು. ಆದರೇ ಉಡುಪಿಗೆ ಆಗಮಿಸಿದ್ದ ವೇಳೆಯೂ ಸಿಎಂ ನಿದ್ದೆಗೆ ಜಾರಿ ಒಂದಷ್ಟು ಹೊತ್ತು ಕಸಿವಿಸಿಗೊಂಡರು.

ಉಡುಪಿಯ ಬ್ರಹ್ಮಾವರದಲ್ಲಿ ಆಯೋಜಿಸಿದ ಕಾರ್ಯಕ್ರಮ ವೇಳೆ ಪ್ರಮೋದ್ ಮಧ್ವರಾಜ್ ಮಾತನಾಡುತ್ತಾ, ಮೂರು ಬಹುಗ್ರಾಮ ಯೋಜನೆಗಳಿಗೆ ಪ್ರಸ್ತಾಪ ಸಲ್ಲಿಸಿರುವೆ ಸರ್ ಎಂದು ಸಿಎಂ ಅವರನ್ನು ನೋಡಿದಾಗ ಅವರು ನಿದ್ರೆಗೆ ಜಾರಿದ್ದು ಎರಡು ಬಾರಿ ಸರ್..ಸರ್ ಎಂದು ಕರೆಯುತ್ತಾರೆ. ಆದರೂ ಎಚ್ಚರವಾಗದೇ ಇದ್ದಾಗ ಸಭೆಯಲ್ಲಿ ಆಸೀನರಾದ ಇತರರು ಸಿಎಂ ಅವರನ್ನು ಎಚ್ಚರಿಸುತ್ತಾರೆ. ಬಳಿಕ ಮಾತು ಮುಂದುವರಿಸಿದ ಮಧ್ವರಾಜ್ ಈ ಯೋಜನೆ ನೀಡಿದರೆ ಉಡುಪಿಯಲ್ಲಿ ನೀರಿನ ಅಭಾವ ನೀಗಲಿದೆ. ದಯವಿಟ್ಟು ಮಾಡಿ ಕೊಡಿ ಅಂದರು. ಇದಕ್ಕೆ ಸಿಎಂ ಗೊಂದಲದಲ್ಲಿಯೇ ತಲೆಯಾಡಿಸಿದ್ರು.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.

Comments are closed.