https://youtu.be/L7wYedIm3HI
ಇಲ್ಲಿನ ಮಾಲ್ಕನ್ಗಿರಿ ಜಿಲ್ಲೆಯ ನಾಯಕ್ಗುಡಾ ಎಂಬಲ್ಲಿ ಇಬ್ಬರು ಮಂಗಳಮುಖಿಯರ ಮೇಲೆ ಯುವಕರ ಗುಂಪೊಂದು ಮನಬಂದಂತೆ ಹಲ್ಲೆ ನಡೆಸಿ ಅವರ ಬಟ್ಟೆಯನ್ನ ಹರಿದಿದ್ದಾರೆ.
ಹಲ್ಲೆಗೆ ಕಾರಣವೇನು?: ಈ ಇಬ್ಬರು ಮಂಗಳಮುಖಿಯರು ಬಸ್ನಲ್ಲಿ ಪ್ರಯಾಣಿಕರ ಬಳಿ ಹಣ ಕೇಳಿದ್ದಾರೆ. ಅವರಲ್ಲಿ ಕೆಲವು ಪುರುಷರು ಹಣ ಕೊಡಲು ನಿರಾಕರಿಸಿದ್ದು, ಅವರ ಮೇಲೆ ಮಂಗಳಮುಖಿಯರು ಶಾಪ ಹಾಕಿದ್ದಾರೆ. ಇದರಿಂದ ಬಸ್ನಲ್ಲಿದ್ದವರು ಹಾಗೂ ಮಂಗಳಮುಖಿಯರ ನಡುವೆ ವಾಗ್ವಾದ ನಡೆದು ಯುವಕರು ಹಲ್ಲೆ ಮಾಡಿದ್ದಾರೆ.
ಈ ಘಟನೆಯನ್ನ ತೀವ್ರವಾಗಿ ಖಂಡಿಸಿರೋ ಮಂಗಳಮುಖಿಯರ ಸಂಘ 24 ಗಂಟೆಯೊಳಗೆ ಹಲ್ಲೆ ಮಾಡಿದ ಆರೋಪಿಗಳನ್ನ ಬಂಧಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಹಾಗೂ ಸಿಎಂ ವಿರುದ್ಧ ಉಗ್ರ ಹೋರಾಟ ನಡೆಸುತ್ತೇವೆ ಅಂತ ಎಚ್ಚರಿಸಿದ್ದಾರೆ.
Comments are closed.