ಉಡುಪಿ: ಹೆಬ್ರಿ ಸಮೀಪದ ನಾಲ್ಕೂರು ಗ್ರಾಮದ ಪೇಟೆ ಬಳಿಯ ಗಣಪತಿ ಎನ್ನುವರನ್ನು ಅವರ ಪತ್ನಿಯೇ ತನ್ನ ಮನೆಯಲ್ಲಿ ಕತ್ತಿಯಿಂದ ಕಡಿದು ಕೊಲೆಗೈದ ಘಟನೆ ಬುಧವಾರ ನಡೆದಿದೆ.

ವಿಪರೀತ ಕುಡಿತದ ಚಟ ಹೊಂದಿದ್ದ ಗಣಪತಿ ಅವರು ಪತ್ನಿ ಜಯಂತಿ ಜೊತೆ ನಿತ್ಯ ಗಲಾಟೆ ಮಾಡುತ್ತಿದ್ದರು. ಬುಧವಾರ ಕೂಡ ಮಧ್ಯಾಹ್ನ ಹೊತ್ತು ಗಲಾಟೆ ತೀವ್ರಗೊಂಡಿತ್ತು ಎನ್ನಲಾಗಿದೆ. ಕುಡಿಯಲು ಹೋಗುವ ಸಲುವಾಗಿ ಹೆಂಡತಿಯಲ್ಲಿ ಹಣ ಕೇಳಿದ ವಿಚಾರದಲ್ಲಿ ಗಣಪತಿ ಹಾಗು ಜಯಂತಿ ಮಧ್ಯ ಗಲಾಟೆಯಾಗಿ ಹೆಂಡತಿ ಜಯಂತಿ ಕತ್ತಿಯಿಂದ ಗಣಪತಿ ಕುತ್ತಿಗೆ ಕಡಿದು ಕೊಲೆ ಮಾಡಿರುವುದಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.