ಕರ್ನಾಟಕ

ಐಎಎಸ್ V/S ಐಪಿಎಸ್ ಜಡೆ ಜಗಳದಿಂದ ಸರ್ಕಾರಕ್ಕೆ ಮುಜುಗರ?: ಸ್ಥಳ ನಿಯೋಜಿಸದೆ ರೋಹಿಣಿ ಸಿಂಧೂರಿ, ರೂಪಾ ಡಿ. ವರ್ಗಾವಣೆ..!

Pinterest LinkedIn Tumblr

ಬೆಂಗಳೂರು: ಐಎಎಸ್‌ ರೋಹಿಣಿ ಸಿಂಧೂರಿ ಮತ್ತು ಐಪಿಎಸ್‌ ಡಿ.ರೂಪಾ ಕಿತ್ತಾಟದ ಬೆನ್ನಲ್ಲೇ ರಾಜ್ಯ ಸರ್ಕಾರ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ನೀಡಿದೆ. ರೋಹಿಣಿ ಸಿಂಧೂರಿ, ಡಿ.ರೂಪಾ ಮೌದ್ಗಿಲ್‌ ಹಾಗೂ ಡಿ.ರೂಪಾ ಅವರ ಪತಿ ಮನೀಶ್‌ ಮೌದ್ಗಿಲ್‌ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಮಂಗಳವಾರ ಬೆಳಿಗ್ಗೆಯಷ್ಟೇ ಸರ್ಕಾರದ ಮುಖ್ಯಕಾರ್ಯದರ್ಶಿಗಳು ರೋಹಿಣಿ ಸಿಂಧೂರಿ ಹಾಗೂ ಡಿ.ರೂಪಾ ಅವರಿಗೆ ನೋಟಿಸ್‌ ನೀಡಿ ಖಡಕ್‌ ಸೂಚನೆ ನೀಡಿದ್ದರು. ರೋಹಿಣಿ ಸಿಂಧೂರಿ ಮತ್ತು ಡಿ.ರೂಪಾ ಅವರಿಗೆ ಯಾವುದೇ ಸ್ಥಳ ನಿಯೋಜನೆ ಮಾಡಿಲ್ಲ.

ಮನೀಶ್‌ ಮೌದ್ಗಿಲ್‌ ಅವರು ಸರ್ವೆ ಮತ್ತು ಲ್ಯಾಂಡ್‌ ರೆಕಾರ್ಡ್‌ ಇಲಾಖೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸದ್ಯ ಅವರನ್ನು ಆಡಳಿತ ಸುಧಾರಣೆ ಇಲಾಖೆಗೆ ವರ್ಗಾವಣೆ ಮಾಡಿದೆ. ಸರ್ವೆ ಮತ್ತು ಲ್ಯಾಂಡ್‌ ರೆಕಾರ್ಡ್‌ ಇಲಾಖೆಗೆ ಅಲ್ಲಿಯೇ ಹೆಚ್ಚುವರಿ ನಿದೇಶಕರಾಗಿದ್ದ ಸಿ.ಎನ್‌.ಸುಧೀಂದ್ರ ಅವರನ್ನು ನೇಮಿಸಿದೆ. ರೋಹಿಣಿ ಸಿಂಧೂರಿ ಅವರು ಧಾರ್ಮಿಕ ದತ್ತಿ ಇಲಾಖೆಯ ಆಯಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದು ಅವರ ಜಾಗಕ್ಕೆ ಕೌಶಲ್ಯ ಅಭಿವೃದ್ಧಿ ಇಲಾಖೆಯ ಬಸವರಾಜೇಂದ್ರ ಎಚ್‌ ಅವರನ್ನು ನೇಮಕ ಮಾಡಿದೆ. ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗದ್ದ ಡಿ.ರೂಪಾ ಅವರನ್ನು ವರ್ಗಾವಣೆ ಮಾಡಿದ್ದು, ಭಾರತಿ.ಡಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇತರೆ ಅಧಿಕಾರಿಗಳ ವರ್ಗಾವಣೆ
ರೋಹಿಣಿ ಸಿಂಧೂರಿ, ಡಿ.ರೂಪ ಹಾಗೂ ಮನೀಶ್‌ ಮೌದ್ಗಿಲ್‌ ಜತೆಗೆ ಇತರೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಎಚ್‌.ವಿ.ದರ್ಶನ್‌ ಎಂಬುವವರನ್ನು ತುಮಕೂರು ಮಹಾನಗರ ಪಾಲಿಕೆಗೆ ಆಯುಕ್ತರಾಗಿ ನೇಮಿಸಿದೆ. ಆಡಳಿತ ಸುಧಾರಣೆ ಇಲಾಖೆಯ ಡಿ.ಶ್ರೀವತ್ಸಾ ಕೃಷ್ಣ ಅವರನ್ನು ಸ್ಥಳ ನಿಯೋಜನೆಗೆ ಕಾಯ್ದಿರಿಸಿದೆ.

 

Comments are closed.