ಕರ್ನಾಟಕ

ಮದುವೆ ಮಾಡಿಕೊಳ್ಳಲು ಹುಡುಗಿ ಹುಡುಕಿಕೊಡಿ: ಶಿವಮೊಗ್ಗ ಎಸ್‌ಪಿಗೆ ಪತ್ರ ಬರೆದ ಯುವಕ..!

Pinterest LinkedIn Tumblr

ಶಿವಮೊಗ್ಗ: ಮದುವೆ ಮಾಡಿಕೊಳ್ಳಲು ಹುಡುಗಿ ಹುಡುಕಿಕೊಡುವಂತೆ ಭದ್ರಾವತಿಯ ನಿವಾಸಿ ಎನ್ನಲಾದ ಓ.ಎಸ್.ಪ್ರವೀಣ್ ಎಂಬಾತ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಮೂಲತಃ ಆಂಧ್ರಪ್ರದೇಶದ ಮಡಕಶಿರಾದ ನಿವಾಸಿ ಪ್ರವೀಣ್ ಪೋಷಕರು ಕೆಲಸದ ನಿಮಿತ್ತ ಭದ್ರಾವತಿಯಲ್ಲಿ ನೆಲೆಸಿದ್ದು ತಾನು ಈ ಹಿಂದೆ ಬೆಂಗಳೂರಿನ ಸಾಫ್ಟ್‌ವೇರ್ ಹಾಗೂ ಚಿಟ್ಸ್ ಕಂಪನಿಗಳಲ್ಲಿ ಕೆಲಸ ಮಾಡಿರುವೆ. ಸದ್ಯ ಭದ್ರಾವತಿಯಲ್ಲಿರುವ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿರುವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದು, ವಿದ್ಯಾರ್ಹತೆ ನಮೂದಿಸಿಲ್ಲ.

ತನ್ನ ಜಾತಿ, ವಿಳಾಸ ಉಲ್ಲೇಖಿಸಿದ್ದು, ನಾನು ವಧು ಅನ್ವೇಷಣೆಯಲ್ಲಿ ತೊಡಗಿದ್ದು, ಯಾರೂ ಸರಿಹೋಗದ ಆಗದ ಕಾರಣ ತಾವೇ ಹುಡುಗಿ ಹುಡುಕಿಕೊಡುವಂತೆ ಕೇಳಿದ್ದಾರೆ. ತನ್ನ ಬಗ್ಗೆ ಮಾಹಿತಿ ಪಡೆಯಲು ಭದ್ರಾವತಿ ನಗರಸಭೆ ಸದಸ್ಯರ ಹೆಸರು ಉಲ್ಲೇಖಿಸಿದ್ದಾರೆ.

’ಈ ವಿಚಾರ ನಮ್ಮ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂಬ ಹಿಂಬರಹ ಸಂಬಂಧಿಸಿದ ವ್ಯಕ್ತಿಗೆ ಕೊಟ್ಟಿದ್ದೇವೆ. ಪತ್ರ ಬರೆದ ವ್ಯಕ್ತಿ ಮಾನಸಿಕ ಅಸ್ವಸ್ಥನೇ ಇಲ್ಲವೇ ತಮಾಷೆ ಮಾಡಲು ಈ ರೀತಿ ಬರೆದಿದ್ದಾರೆಯೇ ಎಂದು ಪರಿಶೀಲಿಸಲು ಸಂಬಂಧಿಸಿದ ಪೊಲೀಸ್ ಠಾಣೆಗೆ ಸೂಚಿಸಿದ್ದೇನೆ. ದುರುದ್ದೇಶದಿಂದ ಆ ರೀತಿ ಬರೆದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು‘ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದ್ದಾರೆ.

 

Comments are closed.