ಕರಾವಳಿ

ಉಡುಪಿ ಶಿವಳ್ಳಿಯ ಮನೆಯಲ್ಲಿ 3 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು: ಇಬ್ಬರು ಆರೋಪಿಗಳ ಬಂಧನ

Pinterest LinkedIn Tumblr

ಉಡುಪಿ: ಕಳೆದ ಕೆಲ ತಿಂಗಳ ಹಿಂದೆ ಉಡುಪಿ ತಾಲೂಕು ಶಿವಳ್ಳಿ ಎಂಬಲ್ಲಿನ ಮನೆಯಲ್ಲಿ ನಡೆದಿದ್ದ ಚಿನ್ನಾಭರಣ ಕಳವು ಆರೋಪಿಗಳನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಅಂಬಾಗಿಲು‌ ನಿವಾಸಿ ಪ್ರಮೀಳಾ ಬಂಗೇರ ಎನ್ನುವರ ಮನೆಯಲ್ಲಿ ಇದೇ ವರ್ಷ ಜ.21 ರಿಂದ ಫೆ.20 ರ ನಡುವೆ ಈ ಕಳ್ಳತನ ನಡೆದಿತ್ತು. ಗೋದ್ರೇಜ್‌ನಲ್ಲಿದ್ದ 2 ಬಂಗಾರದ ಸರ, 2 ಬಳೆ, 3 ಉಂಗುರ, 1 ಜೊತೆ ಕಿವಿಯ ಓಲೆ, 1 ಬ್ರೆಸ್‌ಲೆಟ್‌ ಸಹಿತ ಒಟ್ಟು ಸುಮಾರು 9 ಪವನ್‌ ತೂಕದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದ್ದು ಕಳವಾದ ಸೊತ್ತುಗಳ ಅಂದಾಜು ಮೌಲ್ಯ 3,15,000/- ಆಗಿತ್ತು. ಮನೆಗೆ ಬರುತ್ತಿದ್ದ ಸಂತೋಷ ಎಂಬಾತನ ಮೇಲೆ ಸಂಶಯ ಇರುವುದಾಗಿ ಪ್ರಮೀಳಾ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.                    

ಪ್ರಕರಣದಲ್ಲಿ  ಆರೋಪಿ ಪತ್ತೆಯ ಬಗ್ಗೆ ವಿಶೇಷ ಕರ್ತವ್ಯದಲ್ಲಿದ್ದ ಪಿಎಸ್ಐ ಪ್ರಸಾದ್‌ಕುಮಾರ್‌ ಕೆ.  ಹಾಗೂ ಸಿಬ್ಬಂದಿಯವರಾದ  ಸತೀಶ್, ಕಿರಣ್  ಆರೋಪಿ ಶಿವಳ್ಳಿ ನಿವಾಸಿ ಸಂತೋಷ್ ಪೂಜಾರಿ (36) ಎಂಬಾತನನ್ನು ಉಡುಪಿ ತಾಲೂಕು ಕೃಷ್ಣ ಮಠದ ಗೀತಾ ಮಂದಿರ ಬಳಿಯಿಂದ ಮತ್ತು  ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಕಟಪಾಡಿ ನಿವಾಸಿ ರಾಕೇಶ್ ಪಾಲನ್ (37) ಎಂಬಾತನನ್ನು  ಉಡುಪಿ ಉಜ್ವಲ್ ಬಾರ್ ಎದುರಿನಿಂದ ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ  2,18,169/- ರೂಪಾಯಿ ಮೌಲ್ಯದ   ಚಿನ್ನಭರಣಗಳನ್ನು ವಶಪಡಿಸಿ  ನ್ಯಾಯಾಲಯಕ್ಕೆ  ಹಾಜರುಪಡಿಸಲಾಗಿದ್ದು ನ್ಯಾಯಾಲಯವು  ಆರೋಪಿಗಳಿಗೆ  15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ಉಡುಪಿ ಪೊಲೀಸ್‌ ಅಧೀಕ್ಷಕ ಎನ್‌. ವಿಷ್ಣುವರ್ಧನ್‌ ಆದೇಶದಂತೆ,  ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ, ಉಡುಪಿ ಡಿವೈಎಸ್ಪಿ ಸುಧಾಕರ ಸದಾನಂದ ನಾಯ್ಕ್ ನಿರ್ದೇರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ ಕುಮಾರ್ ಪಿರವರ ಮಾರ್ಗದರ್ಶನದಂತೆ ಪಿ.ಎಸ್‌.ಐ-1 ಮಹೇಶ್ ಟಿ.ಎಮ್, ಕೆ. ಪಿ.ಎಸ್‌.ಐ ತನಿಖೆ-1 ಪ್ರಸಾದ್‌ಕುಮಾರ್‌, ಪಿ.ಎಸ್.ಐ-2  ವಾಸಪ್ಪ ನಾಯ್ಕ್, ಹಾಗೂ ಎ.ಎಸ್.ಐ ಅರುಣ್, ಸಿಬ್ಬಂದಿಗಳಾದ ಸತೀಶ್ ಬೆಳ್ಳೆ , ಕಿರಣ್ ಮೊದಲಾದವರು ಸಹಕರಿಸಿದ್ದರು.

                                            

Comments are closed.