ಕರ್ನಾಟಕ

ವಿದ್ಯಾಭ್ಯಾಸಕ್ಕಿಂತ ಹಿಜಾಬ್ ಮುಖ್ಯ ಎನ್ನುವವರು ಪಾಕ್’ಗೆ ಹೋಗಲಿ: ಪ್ರಮೋದ್ ಮುತಾಲಿಕ್

Pinterest LinkedIn Tumblr

ಬೆಳಗಾವಿ: ವಿದ್ಯಾಭ್ಯಾಸ, ಶಿಕ್ಷಣಕ್ಕಿಂತ ಶಾಲಾ-ಕಾಲೇಜು​ಗಳಲ್ಲಿ ಹಿಜಾಬ್ ಮುಖ್ಯ ಎನ್ನುವವರು ಅಫ್ಘಾನಿಸ್ತಾನ ಅಥವಾ ಪಾಕಿಸ್ತಾನಕ್ಕೆ ಹೋಗಲಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್​ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿ, ವಿವಾದ ಸೃಷ್ಟಿಯಾದ ಆರಂಭದಲ್ಲಿಯೇ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದರೆ, ರಾಜ್ಯಾದ್ಯಾಂತ ಈ ಪ್ರಕರಣ ಹಬ್ಬುತ್ತಿರಲಿಲ್ಲ. ಆರಂಭದಲ್ಲಿಯೇ ಹಿಜಾಬ್​ಧಾರಿ ವಿದ್ಯಾರ್ಥಿನಿಯನ್ನು ಕಾಲೇಜ್​ಗಳಲ್ಲಿ ಅಮಾನತು ಮಾಡಬೇಕಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಶಿಸ್ತಿಗಿಂತ ಇಸ್ಲಾಂ ಸಂಸ್ಕೃತಿಯೇ ಪ್ರಮುಖ ಎನ್ನುವವರು ಅಫ್ಘಾನಿಸ್ತಾನ ಹೋಗಲಿ ಎಂದಿದ್ದಾರೆ.

ಬುರ್ಕಾ ಧರಿಸುತ್ತೇವೆ, ಹಿಜಾಬ್ ಹಾಕುತ್ತೇವೆ, ಅಲ್ಲಿಯೇ ನಮಾಜ್​ ಕೂಡ ಮಾಡುತ್ತೇವೆ ಎನ್ನುವ ಮಟ್ಟಿಗೆ ಸರ್ಕಾರ ಸಡಿಲಿಕೆ ಕೊಡಬಾರದಿತ್ತು. ಈಗಲೂ ಕಾಲ ಮಿಂಚಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಹಿಜಾಬ್​ ಬೇಕೆಂದು ಹಠ ಮಾಡುವವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಪ್ರಮೋದ್ ಮುತಾಲಿಕ್”​ ಒತ್ತಾಯಿಸಿದ್ದಾರೆ.

Comments are closed.