ಕರಾವಳಿ

ಮಾಜಿ ಶಾಸಕ ಬಾವಾರಿಂದ ಹಿಂದೂ ರುದ್ರಭೂಮಿ, ಮಸೀದಿಗಳಿಗೆ ಅಗತ್ಯ ವಸ್ತುಗಳ ಕಿಟ್ ವಿತರಣೆ

Pinterest LinkedIn Tumblr

ಮಂಗಳೂರು: ದಿವಂಗತ ರಾಜೀವ್ ಗಾಂಧಿಯವರ ಪುಣ್ಯ ತಿಥಿಯ ಅಂಗವಾಗಿ ಮಾಜಿ ಶಾಸಕ ಮೊಹಿದೀನ್ ಬಾವಾ ಅವರಿಂದ ಕ್ಷೇತ್ರ ವ್ಯಾಪ್ತಿಯ ಮಸೀದಿ, ಹಿಂದೂ ರುದ್ರಭೂಮಿಗಳಿಗೆ ಶವಸಂಸ್ಕಾರಕ್ಕೆ ಅಗತ್ಯವಿರುವ ವಸ್ತುಗಳ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು.

ಪ್ರಾರಂಭದಲ್ಲಿ ಅವರು ಮಂಗಳ ಮುಖಿಯರಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಿದರು. ಈ ವೇಳೆ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಶೆಟ್ಟಿ, ಉಪಾಧ್ಯಕ್ಷ ಶ್ಯಾಮರಾಯ ಸುವರ್ಣ. ಆನಂದ ಅಮೀನ್, ಬಶೀರ್ ಬೈಕಂಪಾಡಿ ,ಕಾರ್ಯದರ್ಶಿ ರಾಜೇಶ್, ಸುರತ್ಕಲ್ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಜೈಸನ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಎಸ್ಇ ಎಸ್ಟಿ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ, ಮೊದಲಾದವರು ಉಪಸ್ಥಿತರಿದ್ದರು.

ನಂತರ ಸುರತ್ಕಲ್, ಕಂದಾವರ, ಪಚ್ಚನಾಡಿಯಲ್ಲಿರುವ ಹಿಂದೂ ರುದ್ರಭೂಮಿಗೆ ಅಗತ್ಯ ವಸ್ತುಗಳ ಕಿಟ್ ಅನ್ನು ವಿತರಿಸಿದರು.

ಬಳಿಕ ಮಲ್ಹರುಲ್ ಅವಾಕಿಫ್ ಜುಮಾ-ಮಸೀದಿ ಸುರಲ್ಪಾಡಿಗೆ ಮಯ್ಯತ್ ಪರಿಪಾಲನೆಗೆ ಅಗತ್ಯ ವಿರುವ ವಸ್ತುಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಜುಮಾ-ಮಸೀದಿ ಅಧ್ಯಕ್ಷ ಆರ್.ಎಸ್ ಮಹಮ್ಮದ್ ಪ್ರಧಾನ ಕಾರ್ಯದರ್ಶಿ ಶೇಖ್ ಮುಖ್ತಿಯಾರ್ ಸದಸ್ಯರಾದ ಸಲೀಂ ಹಾಗೂ ಮೌಲಾನ ಇಲ್ಯಾಸ್‌ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ಅಡ್ಯಾರ್ ಕಣ್ಣೂರು ಮಸೀದಿಗೂ ಶವ ದಫನಕ್ಕೆ ಅಗತ್ಯ ವಸ್ತುಗಳ ಕಿಟ್ ಅನ್ನು ಮೊಯಿದೀನ್ ಬಾವಾ ವಿತರಿಸಿದರು.

Comments are closed.