ಕರಾವಳಿ

ಮೇಯರ್‌ರಿಂದ ಮನಪಾ ವ್ಯಾಪ್ತಿಯ ವಿವಿಧ ರಾಜ ಕಾಲುವೆಗಳ ಪರಿಶೀಲನೆ

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಕಂಕನಾಡಿ ಪ್ರದೇಶದಲ್ಲಿರುವ ವಿವಿಧ ರಾಜ ಕಾಲುವೆಗಳನ್ನು ಮಂಗಳೂರು ಮೇಯರ್ ಪ್ರೇಮನಂದ ಶೆಟ್ಟಿ ಪರಿಶೀಲಿಸಿದರು.

ಅರಬ್ಬಿ ಸಮುದ್ರದಲ್ಲಿ ಚಂಡಮಾರುತದಿಂದ ತಕ್ಷಣದಲ್ಲೆ ಕರಾವಳಿ ಭಾಗದಲ್ಲಿ ಜೋರಾಗಿ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಬಾಕಿ ಇರುವ ಹೂಳೆತ್ತುವ ಕೆಲಸವನ್ನು ತುತಾ೯ಗಿ ಪೂತಿ೯ಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಹಾಗೂ ಪಾಲಿಕೆಯಲ್ಲಿ 24 ಗಂಟೆ ಕಾಯ೯ಚರಿಸುವ ಕಂಟ್ರೋಲ್ ರೂಮ್ ಅನ್ನು ತೆರೆಯುವಂತೆ ಮತ್ತು ಎಲ್ಲಾ ಇಂಜಿನಿಯರ್ ಗಳನ್ನು ಕಾಯ೯ ಪ್ರವೃತ್ತರಾಗಿರಲು ಅಧಿಕಾರಿಗಳಿಗೆ ನಿದೇಶ೯ನ ನೀಡಿದರು.

ಮಹಾನಗರಪಾಲಿಕೆಯ ಆಯುಕ್ತರಾದ ಅಕ್ಷಯ್ ಶ್ರೀಧರ್, ಲೆಕ್ಕ ಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಲೀಲಾವತಿ ಪ್ರಕಾಶ್, ಸದಸ್ಯರುಗಳಾದ ರಪೂಶ್ರೀ ಪೂಜಾರಿ, ಪ್ರವೀಣ್ ಚಂದ್ರ ಆಳ್ವ, ಶೋಭ ಪೂಜಾರಿ, ಚಂದ್ರಾವತಿ, ಮತ್ತು ಉಪ ಆಯುಕ್ತರು ಅಭಿವೃದ್ಧಿ ಶ್ರೀ ಗಣೇಶನ್ ಆರ್ ಉಪಸ್ಥಿತರಿದ್ದರು.

Comments are closed.