ಕರಾವಳಿ

ಈದುಲ್ ಫಿತರ್ ದಿನ ಲಾಕ್‌ಡೌನ್ ಸಡಿಲಿಸಲು ಜಿಲ್ಲಾಡಳಿತದೊಂದಿಗೆ ಎಸ್‌ಡಿಪಿಐ ಆಗ್ರಹ

Pinterest LinkedIn Tumblr

ಮಂಗಳೂರು, ಮೇ 12 : ಮುಸ್ಲಿಂ ಸಮುದಾಯವು ಶ್ರದ್ದೆ ಹಾಗೂ ಭಕ್ತಿಯಿಂದ ಆಚರಿಸುವ ಪವಿತ್ರ ರಂಜಾನ್ ಮಾಸದ ವ್ರತವು ಒಂದೆರಡು ದಿನಗಳಲ್ಲಿ ಮುಗಿಯಲಿದ್ದು ನಾಳೆ ಅಂದರೆ13 ನೇ ತಾರೀಕಿನಂದು ಗುರುವಾರ ರಂಜಾನ್ ಹಬ್ಬವು ಬರಲಿದ್ದು ಅಂದು ಕೋವಿಡ್ ಮಾರ್ಗ ಸೂಚಿಯ ಪ್ರಕಾರ ಯಾವುದೇ ಮಸೀದಿ ಅಥವಾ ಈದ್ಗಾ ಗಳಲ್ಲಿ ಪ್ರಾರ್ಥನೆ ನಡೆಯುವುದಿಲ್ಲ. ಈ ಬಗ್ಗೆ ಸರಕಾರದೊಂದಿಗೆ ಮುಸ್ಲಿಂ ಸಮುದಾಯ ಸಂಪೂರ್ಣ ಸಹಕಾರ ನೀಡುತ್ತದೆ.

ಆದರೆ ರಂಜಾನ್ ಹಬ್ಬದ ಸಾಂಪ್ರದಾಯಿಕ ಪದ್ದತಿಯಾದ ದಾನಧರ್ಮ, ಹಿರಿಯರ ಹಾಗೂ ಸಂಬಧಿಕರ ಭೇಟಿಯಂತಹ ಕಡ್ಡಾಯ ಕರ್ಮಗಳನ್ನು ಪಾಲಿಸಬೇಕಾದ ಅನಿವಾರ್ಯತೆ ಇರುವುದರಿಂದ ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದ್ ದಿನದಂದು ಲಾಕ್ಡೌನ್ ಸ್ವಲ್ಪ ಮಟ್ಟಿಗೆ (ಸಂಜೆ 4 ಘಂಟೆಯ ತನಕ)ಸಡಿಲಿಸಿ ಮುಕ್ತವಾಗಿ ಸಂಚರಿಸಲು ಅವಕಾಶವನ್ನು ಮಾಡಿಕೊಡಬೇಕೆಂದು ಎಸ್‌ಡಿಪಿಐ ದಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

Comments are closed.