ಮಂಗಳೂರು, ಎಪ್ರಿಲ್.29 : ಲಾಕ್ ಡೌನ್ ನಿಂದಾಗಿ ಹೋಟೆಲ್, ಕ್ಯಾಂಟಿನ್ ಗಳು ಮುಚ್ಚಿರುವ ಹಿನ್ನಲೆಯಲ್ಲಿ ಕಾರ್ಯನಿರತರಾಗಿರುವ ಪತ್ರಕರ್ತರಿಗೆ ಊಟ, ತಿಂಡಿ ಸಮಯಕ್ಕೆ ಲಭಿಸದೇ ಇರುವ ವಿಚಾರ ಪತ್ರಕರ್ತರ ಸಂಘದ ಗಮನಕ್ಕೆ ಬಂದಿದೆ.
ಈ ಹಿನ್ನಲೆಯಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಎ.30 ರಿಂದ ಪತ್ರಕರ್ತರಿಗೆ ಪತ್ರಿಕಾ ಭವನದಲ್ಲಿ ಗಂಜಿ ಊಟದ ವ್ಯವಸ್ಥೆ ಮಾಡಲಾಗಿದೆ.
ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ ರೈ ಕಟ್ಟ ಇದರ ಉಸ್ತುವಾರಿಯನ್ನು ನೋಡಿಕೊಳ್ಳಲಿ ದ್ದಾರೆ. ಈ ಕುರಿತು ಮಾಹಿತಿಗಾಗಿ ಭಾಸ್ಕರ ರೈ ಅವರನ್ನು ಸಂಪರ್ಕಿಸಬಹುದು (ಮೊ 91 97411 58710).
ಪ್ರತಿನಿತ್ಯ ಮಧ್ಯಾಹ್ನ 12:30ರಿಂದ 2:00 ಗಂಟೆ ತನಕ ಗಂಜಿ ಊಟ ಲಭ್ಯ ಇರುತ್ತದೆ. ಲಾಕ್ ಡೌನ್ ನಿಂದಾಗಿ ತೊಂದರೆಗೊಳಗಾಗಿರುವ ವಿವಿಧ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರು ಗಂಜಿ ಊಟದ ಪ್ರಯೋಜನ ಪಡೆದುಕೊಳ್ಳಬಹುದು.
Comments are closed.