ಕಳೆದೆರಡು ವಾರಗಳಿಂದ ಅನಾರೋಗ್ಯಕ್ಕೊಳಗಾಗಿ ಬಿಗ್ ಬಾಸ್ ಸಂಚಿಕೆಗೆ ಗೈರಾಗಿದ್ದ ನಟ ಸುದೀಪ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಬಿಗ್ ಬಾಸ್ ರಿಯಾಲಿಯಿ ಶೋ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ನಿಮ್ಮ ಪ್ರಾರ್ಥನೆಗೆ ಧನ್ಯವಾದ. ನಾಗೀಗ ಚೇತರಿಸಿಕೊಂಡಿದ್ದು, ಈ ವಾರಾಂತ್ಯದ ಬಿಗ್ಬಾಸ್ ಸಂಚಿಕೆಯಲ್ಲಿ ಭಾಗವಹಿಸಲು ಎದುರುನೋಡುತ್ತಿದ್ದೇನೆ. ನನ್ನ ಆರೋಗ್ಯದ ಮೇಲೆ ನಿಗಾ ಇರಿಸಿದ ವೈದ್ಯರಾದ ವೆಂಕಟೇಶ್ ಹಾಗೂ ವಿನಯ್ ಅವರಿಗೆ ಧನ್ಯವಾದ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸುದೀಪ್, ಕಳೆದೆರಡು ವಾರದ ಬಿಗ್ಬಾಸ್ ‘ವಾರದ ಕಥೆ ಕಿಚ್ಚನ ಜೊತೆ’ ಹಾಗೂ ‘ಸೂಪರ್ ಸಂಡೇ ವಿತ್ ಸುದೀಪ್’ನಲ್ಲಿ ಭಾಗವಹಿಸಿರಲಿಲ್ಲ. .
ಕಳೆದ ಎಂಟು ಆವೃತ್ತಿಗಳಲ್ಲಿ ಹೀಗಾಗಿದ್ದು ಇದೇ ಮೊದಲಾಗಿತ್ತು. ಮನೆಯೊಳಗಿದ್ದ ಸ್ಪರ್ಧಿಗಳೂ, ಸುದೀಪ್ ಅವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪತ್ರದ ಮುಖೇನ ಕೋರಿದ್ದರು. ಸುದೀಪ್ ಅಭಿಮಾನಿಗಳೂ ಅವರು ಶೀಘ್ರವೇ ಗುಣಮುಖರಾಗಲಿ ಎಂದು ಟ್ವಿಟರ್, ಇನ್ಸ್ಟಾಗ್ರಾಂನಲ್ಲಿ ಸಂದೇಶಗಳನ್ನು ಕಳುಹಿಸಿದ್ದರು.
ಕಳೆದೆರಡು ವಾರಗಳಿಂದ ಅನಾರೋಗ್ಯಕ್ಕೊಳಗಾಗಿ ಬಿಗ್ ಬಾಸ್ ಸಂಚಿಕೆಗೆ ಗೈರಾಗಿದ್ದ ನಟ ಸುದೀಪ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಬಿಗ್ ಬಾಸ್ ರಿಯಾಲಿಯಿ ಶೋ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ನಿಮ್ಮ ಪ್ರಾರ್ಥನೆಗೆ ಧನ್ಯವಾದ. ನಾಗೀಗ ಚೇತರಿಸಿಕೊಂಡಿದ್ದು, ಈ ವಾರಾಂತ್ಯದ ಬಿಗ್ಬಾಸ್ ಸಂಚಿಕೆಯಲ್ಲಿ ಭಾಗವಹಿಸಲು ಎದುರುನೋಡುತ್ತಿದ್ದೇನೆ. ನನ್ನ ಆರೋಗ್ಯದ ಮೇಲೆ ನಿಗಾ ಇರಿಸಿದ ವೈದ್ಯರಾದ ವೆಂಕಟೇಶ್ ಹಾಗೂ ವಿನಯ್ ಅವರಿಗೆ ಧನ್ಯವಾದ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸುದೀಪ್, ಕಳೆದೆರಡು ವಾರದ ಬಿಗ್ಬಾಸ್ ‘ವಾರದ ಕಥೆ ಕಿಚ್ಚನ ಜೊತೆ’ ಹಾಗೂ ‘ಸೂಪರ್ ಸಂಡೇ ವಿತ್ ಸುದೀಪ್’ನಲ್ಲಿ ಭಾಗವಹಿಸಿರಲಿಲ್ಲ. ಸುದೀಪ್ ಅನುಪಸ್ಥಿತಿಯಲ್ಲಿ ನಡೆದ ಸಂಚಿಕೆಯಲ್ಲಿ, ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದ ಸ್ಪರ್ಧಿಗಳನ್ನು ಹಲವು ಆಟದ ಮುಖಾಂತರ ಸೇಫ್ ಮಾಡಲಾಗಿತ್ತು. ಕಳೆದ ಎಂಟು ಆವೃತ್ತಿಗಳಲ್ಲಿ ಹೀಗಾಗಿದ್ದು ಇದೇ ಮೊದಲಾಗಿತ್ತು. ಮನೆಯೊಳಗಿದ್ದ ಸ್ಪರ್ಧಿಗಳೂ, ಸುದೀಪ್ ಅವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪತ್ರದ ಮುಖೇನ ಕೋರಿದ್ದರು. ಸುದೀಪ್ ಅಭಿಮಾನಿಗಳೂ ಅವರು ಶೀಘ್ರವೇ ಗುಣಮುಖರಾಗಲಿ ಎಂದು ಟ್ವಿಟರ್, ಇನ್ಸ್ಟಾಗ್ರಾಂನಲ್ಲಿ ಸಂದೇಶಗಳನ್ನು ಕಳುಹಿಸಿದ್ದರು.
Comments are closed.