ಕರಾವಳಿ

ಭಾಸ್ಕರ್ ಶೆಟ್ಟಿ ಮರ್ಡರ್; ನಿರಂಜನ್ ಭಟ್ ಜಾಮೀನು ಅರ್ಜಿ ತಿಂಗಳೊಳಗೆ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

Pinterest LinkedIn Tumblr

ಉಡುಪಿ: ಬಹುಕೋಟಿ ಉದ್ಯಮಿಯಾಗಿದ್ದ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಿರಂಜನ್ ಭಟ್ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪ್ರಕರಣವನ್ನು ಒಂದು ತಿಂಗಳೊಳಗೆ ಇತ್ಯರ್ಥಪಡಿಸುವಂತೆ ಸೂಚನೆ ನೀಡಿದೆ.

ಒಂದೊಮ್ಮೆ ಇತ್ಯರ್ಥವಾಗದಿದ್ದರೆ ನಿರಂಜನ್ ಭಟ್ ಗೆ ಜಾಮೀನು ಮಂಜೂರು ಮಾಡುವಂತೆ ಆದೇಶಿಸಿದೆ. ಈ ಪ್ರಕರಣದ ಮುಂದುವರಿದ ಭಾಗವಾಗಿ ಮಂಗಳವಾರ ಉಡುಪಿ ನ್ಯಾಯಾಲಯದಲ್ಲಿ ಸಾಕ್ಷಿದಾರರ ವಿಚಾರಣೆ ನಡೆಸಲಾಯಿತು. ಹಿಂದಿನ ಎಎಸ್ಪಿ ಆಗಿದ್ದ ಸುಮನಾ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಮಾರ್ಚ್ 25ರಂದುಸಿಐಡಿ ತನಿಖಾಧಿಕಾರಿ ಚಂದ್ರಶೇಖರವರ ವಿಚಾರಣೆ ನಡೆಯಲಿದೆ. ಬಳಿಕ ಇನ್ನೋರ್ವ ಸಾಕ್ಷಿದಾರ ವಿವೇಕಾನಂದ ಶೆಟ್ಟಿ ಅವರ ವಿಚಾರಣೆಯೂ ಆ ಬಳಿಕ ನಡೆಯಲಿದೆ. ವಾದ-ಪ್ರತಿವಾದಗಳು ನಡೆದು ಪ್ರಕರಣ ತಿಂಗಳೊಳಗೆ ಇತರ್ಥ್ಯಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಹಿರಿಯ ವಕೀಲ ಶಾಂತರಾಮ್ ಶೆಟ್ಟಿ ಅವರು ತಿಳಿಸಿದ್ದಾರೆ.

Comments are closed.