ಕರ್ನಾಟಕ

ಜನರಿಗೆ ಮುಖ ತೋರಿಸಲಾಗದೇ ಮೋದಿ ಗಡ್ಡ ಬಿಟ್ಟಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ..!

Pinterest LinkedIn Tumblr

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮೊದಲಿನ ಮುಖ‌ ತೋರಿಸಬಾರದೆಂದು ಗಡ್ಡ ಬೆಳೆಸಿದ್ದಾರೆ. ಅಚ್ಛೇ ದಿನ್​ ಆಯೇಗಾ ಎಂದು ನಂಬಿಸಿ ಅಧಿಕಾರಕ್ಕೆ ಬಂದು ಜನರಿಗೆ ಟೋಪಿ ಹಾಕಿಬಿಟ್ಟರು ಎಂದು ಬೆಂಗಳೂರಲ್ಲಿ ನಡೆದ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಜಿಡಿಪಿ ಕುಸಿದಿದೆ. ಮುಂದಿನ ವರ್ಷವೂ ಜಿಡಿಪಿ ಕುಸಿಯಲಿದೆ ಎಂದ ಅವರು, ನಿರ್ಮಲಾ ಸೀತಾರಾಮನ್ ಎಂಬ ಹೆಣ್ಣು ಮಗಳ ಬಳಿಯೂ ಬಿಜೆಪಿ ನಾಯಕರು ಸುಳ್ಳು‌ ಹೇಳಿಸುತ್ತಿದ್ದಾರೆ. ಸಾಲ ಮಾಡಿ ದೇಶ ನಡೆಸುವ ಪರಿಸ್ಥಿತಿ ಈಗ ಎದುರಾಗಿದೆ. ಈ ವರ್ಷವೂ 80 ಸಾವಿರ ಕೋಟಿ ಸಾಲ ಮಾಡುತ್ತಿದ್ದಾರೆ.ಇದೇನಾ ನಿಮ್ಮ ಅಚ್ಛೇ ದಿನ್ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ರಾಜ್ಯದಲ್ಲಿ ಅಸಮರ್ಥ, ಅನೈತಿಕ, ಭ್ರಷ್ಟ ಸರ್ಕಾರವಿದೆ. ಬಿ.ಎಸ್. ಯಡಿಯೂರಪ್ಪ ಜನರ ಆಶೀರ್ವಾದದಿಂದ ಸಿಎಂ ಆಗಿಲ್ಲ. ಮೊದಲ ಸಲ ಬಹುಮತ ಸಾಬೀತು ಮಾಡದೇ ವಿಫಲರಾಗಿದ್ದರು. ನಂತರ ಶಾಸಕರನ್ನು ಖರೀದಿಸಿ ಈಗ ಸಿಎಂ ಆಗಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯ ಎಲ್ಲ ಬೇಡಿಕೆ ಈಡೇರಿಸಿದೆ. ಆದರೆ ಇಷ್ಟೆಲ್ಲ ಮಾಡಿದರೂ ನಮ್ಮ ಸರ್ಕಾರ ಟೇಕಾಫ್ ಆಗಿಲ್ಲ. ಆದರೆ ಬಿಜೆಪಿಯ ಸರ್ಕಾರ ಈಗ ಆಫ್ ಆಗಿಬಿಟ್ಟಿದೆ ಎಂದು ಬೆಂಗಳೂರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.

Comments are closed.