ಕರಾವಳಿ

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರ :ಬಾಲಾಲಯ ನಿರ್ಮಾಣದ ಭೂಮಿ ಪೂಜೆ

Pinterest LinkedIn Tumblr

ಮಂಗಳೂರು : ದ. ಕ. ಜಿಲ್ಲಾ ಮೂಲ್ಯರ ಯಾನೇ ಕುಲಾಲರ ಮಾತೃ ಸಂಘದ ಆಡಳಿತಕೊಳಪಟ್ಟ ಕುಲಶೇಖರ ಶ್ರೀವೀರನಾರಾಯಣ ದೇವಸ್ಥಾನ, ಇದರ ಜೀರ್ಣೋದ್ದಾರ ಕೆಲಸ ಕಾರ್ಯಗಳು ಅತ್ಯಂತ ಸುಲಲಿತವಾಗಿ ನಡೆಯುತ್ತಿದ್ದು, ಫೆಬ್ರವರಿ 17ರಂದು ಬುಧವಾರ ಬೆಳಗ್ಗೆ ಘಂಟೆ 8-44 ಕ್ಕೆ ಒದಗುವ ಮೀನ ಲಗ್ನದಲ್ಲಿ ಬಾಲಾಲಯ ನಿರ್ಮಾಣದ ಸಲುವಾಗಿ *ಭೂಮಿ ಪೂಜೆ* ನಡೆಯಿತು.

ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್. ಜಿಲ್ಲಾ ಪಂಚಾಯತ್ನ ಮಾಜಿ ಉಪಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ . ಜಿ.ಪಂಚಾಯತ್ನ ಮಾಜಿ ಉಪಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ. ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ಮಯೂರ್ ಉಲ್ಲಾಲ್. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪುರುಷೋತ್ತಮ ಕಲ್ಬಾವಿ..ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಮೋದರ ಬ ೦ಗೇರ, ಸೇವ ಸಮಿತಿ ಅಧ್ಯಕ್ಷ ಸುಂದರ ಕುಲಾಲ್ ಶಕ್ತಿನಗರ. ಟ್ರಸ್ಟಿನ ಅಧ್ಯಕ್ಷಪ್ರೇಮನಂದ ಕುಲಾಲ್. ಶ್ರೀಮತಿ ರೂಪ.ಡಿ.ಬಂಗೇರ ಗಿರಿಧರ್ ಜೆ ಮೂಲ್ಯ.,ಅನಿಲ್‌ದಾಸ್ ಅಂಬಿಕಾ ರೋಡು, ಪ್ರವೀಣ್ ಬಸ್ತಿ, ಪ್ರದೀಪ್, ಕಿರಣ್,ಸದಾನಂದ ಕುಲಾಲ್,ಕೋಟೆಕಾರು ಪಟ್ಟಣ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಅನಿಲ್ ಬಗಂಬಿಲ ಎಂ.ಪಿ. ಬಂಗೇರ, ಮುಂಬೈ ಕುಲಾಲ ಸಂಘದ ಅಧ್ಯಕ್ಷ ದೇವದಾಸ್ ಕುಲಾಲ್ ಮಾಜಿ ಅಧ್ಯಕ್ಷ ಗಿರೀಶ ಸಾಲ್ಯಾನ್. ಮುಂಬಯಿ ಕುಲಾಲ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಮಮತಾ ಗುಜರನ್ ಹಾಗೂ ಜಿಲ್ಲೆಯ ಕುಲಾಲ ಸಮಾಜದ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು

Comments are closed.