ಕರಾವಳಿ

ಉಪ್ಪುಂದ ಸಂತೆಯಲ್ಲಿ ಭಿಕ್ಷಾಟನೆ ನಿರತ ಮತ್ತು ಸಂತೆ ವ್ಯಾಪಾರ ಮಾಡುತ್ತಿದ್ದ 6 ಮಕ್ಕಳ ರಕ್ಷಣೆ…!

Pinterest LinkedIn Tumblr

ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕ ಉಡುಪಿ, ಬೈಂದೂರು ಪೊಲೀಸ್ ಠಾಣೆ, ಉಪ್ಪುಂದ ಗ್ರಾಮ ಪಂಚಾಯತ್ ಜಂಟಿ ಕಾರ್ಯಾಚರಣೆ ನಡೆಸಿ 5 ಗಂಡು ಮಕ್ಕಳು ಓರ್ವ ಬಾಲಕಿಯನ್ನು ರಕ್ಷಿಸಿದ್ದಾರೆ. ಉಪ್ಪುಂದ ಸಂತೆಯಲ್ಲಿ ಈ ಘಟನೆ ನಡೆದಿದೆ.

ಆಟಿಕೆ ಲಾರಿಗಾಗಿ ಬಾಲಕನ ಭಿಕ್ಷಾಟನೆ…!
ಮಾರಿಯಮ್ಮನ ಮೂರ್ತಿ ಹೊತ್ತು ಭಿಕ್ಷಾಟನೆ ಮಾಡುತ್ತಿದ್ದ ಹಾವೇರಿ ಮೂಲದ ಮಹಿಳೆ ಯೊಂದಿಗೆ 6 ವರ್ಷದ ಬಾಲಕ ತಾಯಿ ಆಟಿಕೆ ಸಾಮಗ್ರಿ ಸಾಮಾನು ತೆಗೆದು ಕೊಟ್ಟಿಲ್ಲವೆಂದು ಆತ ಬೇರೆಯೇ ಭಿಕ್ಷೆ ಬೇಡಿ ಆಟಿಕೆ ಲಾರಿ ತೆಗೆದುಕೊಂಡು ಖುಷಿ ಪಡುವ ದೃಶ್ಯ ಕಂಡು ಅಧಿಕಾರಿಗಳೇ ಮರುಗಿದರು.

ಇದೇ ವೇಳೆ ಸಂತೆಯಲ್ಲಿ ಬಾಲಕಾರ್ಮಿಕ ಪದ್ಧತಿ ಮತ್ತು ಭಿಕ್ಷಾಟನೆ ಬಗ್ಗೆ ಅರಿವು ನೀಡಿ ಮಕ್ಕಳನ್ನು ರಕ್ಷಿಸಲಾಯಿತು.

ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಕುಂದಾಪುರ ಶಿಶು ಅಭಿವೃದ್ಧಿ ಯೊಜನಾಧಿಕಾರಿ ಶ್ವೇತಾ, ಅಂಗನವಾಡಿ ಮೇಲ್ವಿಚಾರಕಿ ಭಾಗೀರಥಿ, ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳಾದ ಮಹೇಶ್ ದೇವಾಡಿಗ, ಕಪಿಲಾ, ಸಮಾಜ ಕಾರ್ಯಕರ್ತರಾದ ಯೋಗೀಶ್, ಸುರಕ್ಷಾ, ಸಂದೇಶ, ಬೈಂದೂರು ಪೊಲೀಸ್ ಠಾಣಾ ಸಿಬ್ಬಂದಿ ಯಶೋಧಾ, ಉಪ್ಪುಂದ ಗ್ರಾಮ ಪಂಚಾಯತ್ ಸದಸ್ಯ ಮೋಹನಚಂದ್ರ, ಕಾರ್ಯದರ್ಶಿ ಗಿರಿಜಾ, ಸಿಬ್ಬಂದಿ ನರಸಿಂಹ ಭಾಗವಹಿಸಿದ್ದರು .

Comments are closed.