ಮಂಗಳೂರು, ಫೆಬ್ರವರಿ.16 : ನಗರದ ಬೋಳೂರು ಸುಲ್ತಾನ್ ಬತ್ತೇರಿ ಬಳಿ ಇರುವ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ 13ನೇಯ ವರ್ಷದ ಬ್ರಹ್ಮಸ್ಥಾನ ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ್ಯಕ್ರಮ ಫೆಬ್ರವರಿ 18 ರಂದು ಜರುಗಲಿದೆ.
ಅಂದು ಬೆಳಗ್ಗೆ6.00 ಗಂಟೆಗೆ ಗಣ ಹೋಮ, ಬೆಳಗ್ಗೆ 6.00 ರಿಂದ ಸಂಜೆ 6.00ರ ತನಕ ಲಲಿತಾ ಸಹಸ್ರ ನಾಮಾರ್ಚನೆ ಇರುತ್ತದೆ.ಸಂಜೆ 6.00 ಗಂಟೆಗೆ ಕಳಶ ಪೂಜೆ, ಮಹಾ ಅಭಿಷೇಕ, ಅಲಂಕಾರ ಪೂಜೆ, ಮಹಾ ಆರತಿ ಜರುಗಲಿದೆ.
“ಪೂಜನೀಯ ಸ್ವಾಮಿನಿ ಮಂಗಳಾಮೃತ ಪ್ರಾಣ”ರವರಿಗೆ ಸ್ವಾಗತ ಕಾರ್ಯಕ್ರಮ:
ಅಮ್ಮನವರ ಪರಮಶಿಷ್ಯೆ ಹಾಗೂ ಮಾತಾ ಅಮೃತಾನಂದಮಯಿ ಮಠದ ಮಠಾಧಿಪತಿಗಳಾಗಿರುವ ಪೂಜನೀಯ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರು ದಿನಾಂಕ18.2.2021 ,ಗುರುವಾರ ಸಂಜೆ 5.00 ಗಂಟೆಗೆ ಆಗಮಿಸಲಿರುವರು.
ಇವರಿಗೆ ಮಂಗಳೂರಿನ ಭಕ್ತರ ವತಿಯಿಂದ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ ಈ ಕಾರ್ಯಕ್ರಮಕ್ಕೆ ಪ್ರವೇಶಾವಕಾಶ ಇರುತ್ತದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
Comments are closed.