ಕರಾವಳಿ

ಸೇತುವೆ ಕಾಮಗಾರಿ ಹಿನ್ನೆಲೆ: ಘನ ವಾಹನಗಳ ಸಂಚಾರದಲ್ಲಿ ಬದಲಿ ವ್ಯವಸ್ಥೆ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು, ಫೆಬ್ರವರಿ 16 : ಕರ್ನಾಟಕ ರಾಜ್ಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ಮಂಗಳೂರು ವಿಭಾಗದಿಂದ ಸುಳ್ಯ ತಾಲೂಕಿನ ಎಲೆಮಲೆ-ಅರಂತೋಡು ರಸ್ತೆಯ 3.60 ಕಿ.ಮೀ (ಸೇವಾಜೆ) ನ ಹಳೆಯ ಸೇತುವೆಯನ್ನು ಕೆಡವಿ ಅದೇ ಸ್ಥಳದಲ್ಲಿ 10 ಮೀಟರ್ ಅಗಲಕ್ಕೆ ಹೊಸ ಸೇತುವೆ ನಿರ್ಮಿಸ ಬೇಕಾಗಿರುವುದರಿಂದ ಫೆಬ್ರವರಿ 15 ರಿಂದ ಜೂನ್ 30 ರವರೆಗೆ ಈ ರಸ್ತೆಯಲ್ಲಿ ಘನ ವಾಹನಗಳ ಸಂಚಾರ ವವನ್ನು ನಿಷೇಧಿಸಲಾಗಿದೆ.

ಸಾರ್ವಜನಿಕರು ಬದಲಿ ರಸ್ತೆಯಾಗಿ ಅರಂತೋಡು ಮಾರ್ಗದಿಂದ ಎಲೆಮಲೆಗೆ ಸಂಚರಿಸುವ ವಾಹನಗಳು ಸುಳ್ಯ-ಪೈಚಾರು-ಸೋಂಣಂಗೇರಿ-ದೊಡ್ಡತೋಟ ಮೂಲಕ ಹಾಗೂ ಎಲೆಮಲೆ ಮಾರ್ಗದಿಂದ ಅರಂತೋಡಿಗೆ ಸಂಚರಿಸುವ ವಾಹನಗಳು ದೊಡ್ಡತೋಟ-ಸೋಣಂಗೇರಿ-ಪೈಚಾರು ಮೂಲಕ ಅರಂತೋಡಿಗೆ ಸಂಚರಿಸ ಬಹುದು ಎಂದು ಮಂಗಳೂರು ವಿಭಾಗದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.